ಪ್ರಥಮ‌ ಚಿಕಿತ್ಸೆ ಕಿಟ್ ವಿತರಿಸಿದ ಶ್ರೀಕಾಂತ್

ಪ್ರಥಮ‌ ಚಿಕಿತ್ಸೆ ಕಿಟ್ ವಿತರಿಸಿದ ಶ್ರೀಕಾಂತ್

ದಾವಣಗೆರೆ, ಸೆ.11- ಸಾಮಾಜಿಕ ಸೇವಾ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಅವರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ದಕ್ಷಿಣ ಸಂಚಾರಿ ಪೊಲೀಸ್ ಸಿಬ್ಬಂದಿಗಳಿಗೆ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ನೀಡಿದರು. 

ಈ ಕಿಟ್‌ನಲ್ಲಿ, ಅಪಘಾತವಾದಾಗ ಪ್ರಥಮ ಚಿಕಿತ್ಸೆಗೆ ಬೇಕಾಗುವ ಕಾಟನ್, ಪೌಡರ್‌, ಬ್ಯಾಂಡೇಜ್, ಹ್ಯಾಂಡಿ‌ ಪ್ಲಾಸ್ಟ್ ಇರುತ್ತದೆ. ನಗರದಲ್ಲಿ ಕೆಲವು ಕಡೆ ಸಣ್ಣ ‌ಸಣ್ಣ ಅಪಘಾತಗಳಾದ ಸಂದರ್ಭದಲ್ಲಿ ತಕ್ಷಣವೇ ಪ್ರಥಮ‌‌ ಚಿಕಿತ್ಸೆ ಅಗತ್ಯವಿರುತ್ತದೆ. ರಕ್ತ ಸೋರಿಕೆ ತಡೆಗಟ್ಟಬಹುದು. ಎಲ್ಲಾ ವಾಹನಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಇರಬೇಕು. ದಕ್ಷಿಣ ಸಂಚಾರಿ ಪಿ.ಎಸ್.ಐ ಶೈಲಾಜಾ, ಸಿಬ್ಬಂದಿಗಳಾದ ನದಾಫ್, ಬಸವರಾಜ್, ಮಹಂತೇಶ್ ದೊಡ್ಡಮನಿ ಹಾಗೂ ಪ್ರವೀಣ್ ಸಿ. ಇ ಬಸವರಾಜ್ ಇದ್ದರು.

error: Content is protected !!