ವಚನಾಮೃತ ಬಳಗದಿಂದ ಅಕ್ಕನಾಗಮ್ಮ ಮತ್ತು ನುಲಿಯ ಚಂದಯ್ಯ ಜಯಂತ್ಯೋತ್ಸವ

ವಚನಾಮೃತ ಬಳಗದಿಂದ  ಅಕ್ಕನಾಗಮ್ಮ ಮತ್ತು ನುಲಿಯ ಚಂದಯ್ಯ ಜಯಂತ್ಯೋತ್ಸವ

ದಾವಣಗೆರೆ, ಆ. 25- ವಚನಾಮೃತ ಬಳಗದವರಿಂದ ಹುಣ್ಣಿಮೆ ಕಾರ್ಯಕ್ರಮದ ಪ್ರಯುಕ್ತ ಶರಣೆ ಅಕ್ಕನಾಗಮ್ಮ ಮತ್ತು ಶರಣ ನುಲಿಯ ಚಂದಯ್ಯ ಅವರ ಜಯಂತ್ಯೋತ್ಸವವನ್ನು ಆಚರಿಸಲಾಯಿತು.

ವಚನಾಮೃತ ಬಳಗದ ಸೌಮ್ಯ ಸತೀಶ್  ಕಾರ್ಯಕ್ರಮ ಆಯೋಜಿಸಿದ್ದು,  ಕಾರ್ಯಕ್ರಮದಲ್ಲಿ ವಚನಾಮೃತ ಬಳಗದವರಿಗೆ.. ನುಲಿಯ ಚಂದಯ್ಯ ಅವರ ವಚನವನ್ನು ಗುರು ರೇವಣಸಿದ್ದಪ್ಪ ಹೇಳಿಕೊಟ್ಟರು.

ಅಕ್ಕನಾಗಮ್ಮ ಮತ್ತು ನುಲಿಯ ಚಂದಯ್ಯ ಅವರ ಪರಿಚಯ ಹಾಗೂ ವಿಸ್ತಾರವಾಗಿ ಮಮತ ನಾಗರಾಜ್ ಅವರು ತಿಳಿಸಿಕೊಟ್ಟರು.

ನಂತರ ಸದಸ್ಯರೆಲ್ಲರಿಗೂ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ  ನೂತನ ಸದಸ್ಯರಾಗಿ ಆಗಮಿಸಿದ ಸೌಮ್ಯ ಬಸವರಾಜ್ ಬಹುಮಾನ ಪಡೆದರು.

ಕಾರ್ಯಕ್ರಮದಲ್ಲಿ ತನುಜಾ ಬೆಳ್ಳುಳ್ಳಿ, ರತ್ನ ಕಾಟ್ವೆ, ಸುಮಾ, ಗೀತಾ, ಸರೋಜ, ಜ್ಯೋತಿ, ದೀಪ ಕಿರಣ್, ನಿರ್ಮಲ, ಇನ್ನು ಮುಂತಾದವರು ಭಾಗವಹಿಸಿದ್ದರು. ಶಾಂತ ಶಿವಶಂಕರ್ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!