ಲಯನ್ಸ್ ಕ್ಲಬ್‌ನಿಂದ ದೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ ಅವರಿಗೆ ಸನ್ಮಾನ

ಲಯನ್ಸ್ ಕ್ಲಬ್‌ನಿಂದ ದೂಡಾ ಅಧ್ಯಕ್ಷ  ದಿನೇಶ್ ಶೆಟ್ಟಿ ಅವರಿಗೆ ಸನ್ಮಾನ

ದಾವಣಗೆರೆ, ಆ. 21- ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರೂ ಆಗಿರುವ  ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ  ದಿನೇಶ್ ಶೆಟ್ಟಿ  ಅವರನ್ನು ಲಯನ್ಸ್ ಕ್ಲಬ್‌ ವತಿಯಿಂದ ಲಯನ್ಸ್ ಭವನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳುವಯ್ಯ, ಡಾ. ಬಿ.ಎಸ್. ನಾಗಪ್ರಕಾಶ್, ಎ.ಎನ್. ಮದನ್ ಕುಮಾರ್, ಟಿ.ಎಂ. ಪಂಚಾಕ್ಷರಯ್ಯ, ಜಂಬಗಿ ರಾಧೇಶ್, ಎನ್.ಸಿ. ಶಿವಕುಮಾರ್, ಎನ್.ವಿ. ಬಂಡಿವಾಡ, ಎಸ್.ಸಿ. ಹುಲ್ಲತ್ತಿ ಮತ್ತು ಇತರರು  ಸಮಾರಂಭದಲ್ಲಿ ಉಪಸ್ಥಿತರಿದ್ದರು. 

error: Content is protected !!