ಕಕ್ಕರಗೊಳ್ಳ : ಪಟೇಲ್ ವೀರಪ್ಪ ಶಾಲೆಯ ಗಗನ್‌ಗೆ ಚಿಣ್ಣರ ಚಿತ್ರ ಚಿತ್ತಾರ ಪ್ರಶಸ್ತಿ

ಕಕ್ಕರಗೊಳ್ಳ : ಪಟೇಲ್ ವೀರಪ್ಪ ಶಾಲೆಯ ಗಗನ್‌ಗೆ ಚಿಣ್ಣರ ಚಿತ್ರ ಚಿತ್ತಾರ ಪ್ರಶಸ್ತಿ

ದಾವಣಗೆರೆ, ಆ. 20-  ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದ ಪಟೇಲ್ ವೀರಪ್ಪ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಗಗನ್ ಬಿ.ಸಿ. ಇವರು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಮಕ್ಕಳ ಚಿತ್ರಕಲೋತ್ಸವ ಕಾರ್ಯಕ್ರಮದಲ್ಲಿ  `ಚಿಣ್ಣರ ಚಿತ್ರ ಚಿತ್ತಾರ 2023-24’ರ ಪ್ರಶಸ್ತಿ ಪಡೆದಿದ್ದಾರೆ. 

ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಗದಗ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ (ಧಾರವಾಡ) ಮತ್ತು ಬಾಲ ಭವನ ಸೊಸೈಟಿ (ಬೆಂಗಳೂರು) ಇವರು ಕಾರ್ಯಕ್ರಮ ಆಯೋಜಿಸಿದ್ದರು.

ಪ್ರಶಸ್ತಿ ಪಡೆದ ವಿದ್ಯಾರ್ಥಿಯನ್ನು ಮತ್ತು ಮಾರ್ಗದರ್ಶಿ ಶಿಕ್ಷಕರಾದ ಶ್ರೀಮತಿ ಪಿ.ಬಿ. ಉಮಾ ಅವರನ್ನು ಶಾಲಾ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಪ್ರಣಿತ ಗಿರಿರಾಜ್ ಸಂಯೋಜಕರಾದ ಸೋಮಶೇಖರಪ್ಪ ಮತ್ತು ಕಲಿವೀರಪ್ಪ ಮತ್ತು ಶಿಕ್ಷಕರುಗಳು ಅಭಿನಂದಿಸಿದ್ದಾರೆ.

error: Content is protected !!