ಪತ್ರಿಕಾ ವಿತರಕರ ಸಮ್ಮೇಳನದ ಲಾಂಛನ ಅನಾವರಣ

ಪತ್ರಿಕಾ ವಿತರಕರ ಸಮ್ಮೇಳನದ ಲಾಂಛನ ಅನಾವರಣ

ಜಗಳೂರು,ಆ. 5- ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕಣ್ವಕುಪ್ಪಿ ಗವಿಮಠದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 8ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ಪತ್ರಿಕಾ ವಿತರಕರ ನಾಲ್ಕನೇ ರಾಜ್ಯಮಟ್ಟದ ಸಮ್ಮೇಳನದ ಲಾಂಛನ ಅನಾವರಣ ಮಾಡಲಾಯಿತು.

ತಪೋಕ್ಷೇತ್ರ ಕಣ್ವಕುಪ್ಪಿ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಕ.ರಾ.ನಿ.ಪ. ಸಂಘದ ಫಕೃದ್ದೀನ್, ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಚಿದಾ ನಂದ್, ಹಿರಿಯ ಪತ್ರಕರ್ತ ಕೊಟ್ರೇಶ್, ಜಗಳೂರಿನ ಪತ್ರಿಕಾ ವಿತರಕ ಸಿದ್ದೇಶ್ ಎಸ್. ಮಂಜುನಾಥ್ ಡಿ.ಬಿ., ಮಹಾಂತೇಶ ಎಂ., ದಾವಣಗೆರೆ ಪತ್ರಿಕಾ ವಿತರಕರಾದ ಕೃಷ್ಣಮೂರ್ತಿ ಎ.ಎನ್. ಮತ್ತಿತತರರು ಉಪಸ್ಥಿತರಿದ್ದರು.

error: Content is protected !!