ದಾವಣಗೆರೆ, ಜು. 26 – ಜಿ.ಎಂ.ಐ.ಟಿ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ 2023-24 ಬ್ಯಾಚ್ನ ಡಿ. ಜನನಿ ಪ್ರಥಮ ರ್ಯಾಂಕ್ , ಸಿ.ಯು. ಅನುಷ ದ್ವಿತೀಯ ರ್ಯಾಂಕ್ , ಕೆ. ಜೀವಿತಾ 4ನೇ ರ್ಯಾಂಕ್ ನ್ನು ಬಿ.ಇ. ಬಯೋಟೆಕ್ನಾಲಜಿಯಲ್ಲಿ ಪಡೆದಿದ್ದಾರೆ. ವಿ.ಟಿ.ಯು 24ನೇ ಘಟಿಕೋತ್ಸವದಲ್ಲಿ ಪ್ರಥಮ ರ್ಯಾಂಕ್ ಪಡೆದ ಡಿ. ಜನನಿ ಅವರಿಗೆ ವಿಟಿಯು ಬಂಗಾರದ ಪದಕ ಮತ್ತು ಎ.ಸಿ. ಜಯಣ್ಣ ಬಂಗಾರದ ಪದಕಗಳನ್ನು ಪ್ರದಾನ ಮಾಡಲಾಗಿದೆ. ವಿಜೇತರನ್ನು ಕಾಲೇಜಿನ ಛೇರ್ಮನ್ ಜಿ.ಎಮ್. ಲಿಂಗರಾಜು, ಪ್ರಾಂಶುಪಾಲ ಡಾ. ಸಂಜಯ ಪಾಂಡೆ, ಆಡಳಿತ ಮಂಡಳಿ ಪ್ರತಿನಿಧಿ ವೈ.ಯು. ಸುಭಾಶ್ಚಂದ್ರ, ವಿಭಾಗದ ಮುಖ್ಯಸ್ಥ ಡಾ. ಕೆ.ಕೆ. ಪ್ರಕಾಶ್ ಹರ್ಷ ವ್ಯಕ್ತಪಡಿಸಿದ್ದಾರೆ.
July 27, 2024