ರಾಣೇಬೆನ್ನೂರಿನಲ್ಲಿ ಇಂದು ಪತ್ರಿಕಾ ದಿನಾಚರಣೆ

ರಾಣೇಬೆನ್ನೂರಿನಲ್ಲಿ ಇಂದು ಪತ್ರಿಕಾ ದಿನಾಚರಣೆ

ರಾಣೇಬೆನ್ನೂರು ತಾಲ್ಲೂಕು ಪತ್ರಕರ್ತರ ಸಂಘದಿಂದ ಎಸ್‌ಜೆಎಂವಿ ಮಹಿಳಾ ಮಹಾವಿದ್ಯಾಲಯದ ಸಭಾಭವನದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ  ಪತ್ರಿಕಾ ದಿನಾವನ್ನು ಆಚರಿಸಲಾಗುತ್ತಿದ್ದು, ಹಿರಿಯ ಪತ್ರಕರ್ತ  ಅರುಣಕುಮಾರ ಹಬ್ಬು  ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟಿಸುವರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಅರುಣಕುಮಾರ ಪೂಜಾರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ,  ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಡಿವೈಎಸ್ಪಿ ಡಾ. ಗಿರೀಶ ಬೋಜಣ್ಣನವರ, ಕಾಲೇಜಿನ ಪ್ರಾಚಾರ್ಯ ಡಾ. ಆರ್.ವಿ.ಹೆಗಡಾಳ ಅಥಿತಿಗಳಾಗಿರುವರು. ಸಂಘದ ಅಧ್ಯಕ್ಷ  ಎಸ್.ಟಿ.ವೇದಮೂರ್ತಿ ಅಧ್ಯಕ್ಷತೆ ವಹಿಸುವರು.

ಕಾನಿಪ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಕಾರ್ಯಕಾರಿ ಸಮಿತಿ ಸದಸ್ಯ ಪರಸಪ್ಪ ಸತ್ಯಪ್ಪನವರ, ಜಿಲ್ಲಾ ಅಧ್ಯಕ್ಷ  ನಾಗರಾಜ ಕುರವತ್ತೇರ,  ಉಪಾಧ್ಯಕ್ಷ ಎಸ್.ಜಿ.ಮಹಾನುಬಾವಿಮಠ, ಕಾರ್ಯದರ್ಶಿ ಸಂತೋಷ ಮಹಾಂತಶೆಟ್ಟರ, ವಿರೇಶ ಮಡ್ಲೂರ, ಎಸ್ ಟಿ ಜೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಶಿವಕುಮಾರ ಹೊನ್ನಾಳಿ ಆಗಮಿಸುವರು.

error: Content is protected !!