ಕರುಣಾ ಟ್ರಸ್ಟ್‌ನಿಂದ ಕಡು ಬಡ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ

ಕರುಣಾ ಟ್ರಸ್ಟ್‌ನಿಂದ ಕಡು ಬಡ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ

ದಾವಣಗೆರೆ, ಜು. 24-  ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಶೇ 85ಕ್ಕಿಂತ ಹೆಚ್ಚು ಅಂಕ ಗಳಿಸಿದ ಗ್ರಾಮೀಣ ಪ್ರದೇಶದಿಂದ ಬಂದ ಬಡ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಕರುಣಾ ಟ್ರಸ್ಟ್ ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪನವರು ಬುದ್ಧನ ಜೀವನಾನಂದದ ಸೂತ್ರಗಳಾದ ಪ್ರೀತಿ, ಕರುಣೆ, ಉದಾರತೆ, ಸೇವೆ ಮುಂತಾದ ಅಂಶಗಳನ್ನು ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ದಾನಿಗಳಾದ ಡಾ. ಪ್ರಕಾಶ್ ಕುಮಾರ್, ದಿಬ್ಬದಳ್ಳಿ ವರುಣ್ ಮತ್ತು ಟ್ರಸ್ಟಿನ ನಿರ್ದೇಶಕರುಗಳಾದ ಡಾ. ಹೆಚ್.ವಿ. ವಾಮದೇವಪ್ಪ ಮತ್ತು ಮಂಜುಳಾ ಬಸವಲಿಂಗಪ್ಪ ಅವರು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಮಾರ್ಗದರ್ಶನದ ಮಾತುಗಳನ್ನಾಡುವುದರ ಜೊತೆಗೆ  ವಿದ್ಯಾರ್ಥಿ ವೇತನ ನೀಡಿದರು.

error: Content is protected !!