ಬಿಹಾರ್ – ಆಂಧ್ರಪ್ರದೇಶಕ್ಕೆ ಮಾತ್ರ

ಬಿಹಾರ್ – ಆಂಧ್ರಪ್ರದೇಶಕ್ಕೆ ಮಾತ್ರ

2024-25ನೇ ಸಾಲಿಗೆ ರೂ.48 ಲಕ್ಷ ಕೋಟಿ ಮುಂಗಡ ಪತ್ರ ಮಂಡಿಸಿದ್ದು ಶ್ರೀ ಸಾಮಾನ್ಯನಿಗೆ ಆಶಾದಾಯಕವಾಗಿದ್ದು, ಆದಾಯ ತೆರಿಗೆಯಲ್ಲಿ ಹೊಸ ಮತ್ತು ಹಳೆಯ ತೆರಿಗೆ ಪದ್ದತಿಯಲ್ಲಿ ಯಾವುದೇ ರೀತಿಯ ಮಾರ್ಪಾಡುಗಳನ್ನು ಮಾಡದೇ ಕೇವಲ ಸಂಬಳದಾರರಿಗೆ ಪ್ರಮಾಣಿತ ಕಡಿತದಲ್ಲಿ ರೂ.50000 ದಿಂದ ರೂ.65000 (ರೂ.15000/-) ಏರಿಸಿರುವುದು ಬಿಟ್ಟರೆ ಮಧ್ಯಮ ವರ್ಗದ ಮತ್ತು ಸಂಬಳದಾರರಿಗೆ ಅನುಕೂಲವಾಗಿರುವುದಿಲ್ಲ.

ರಕ್ಷಣಾ ಇಲಾಖೆಗೆ ಹೆಚ್ಚಿನ ಹಣ ಕ್ರೋಢೀಕರಿಸಿದ್ದು ಗಡಿ ಭಾಗದ ಸೈನಿಕರಿಗೆ ಆಶಾದಾಯಕವಾಗಿದೆ, ಅದರಲ್ಲಿ ಹೆಚ್ಚಿನ ರೀತಿಯ ಅನುಕೂಲತೆಗಳನ್ನು ರಕ್ಷಣಾ ಸೈನಿಕರಿಗೆ ಕೊಟ್ಟಿರುವುದು ಆಶಾದಾಯಕ. ಮೇಕ್-ಇನ್-ಇಂಡಿಯಾ ಕಳೆದ ವರ್ಷದಿಂದ ಹಣವನ್ನು ಕ್ರೋಢೀಕರಿಸಿ ಎಂಎಸ್ಎಂಇ ಅಡಿಯಲ್ಲಿ ದಾಖಲಾತಿಯ ಕೈಗಾರಿಕೋದ್ಯಮ ಕಾರ್ಯಗತವಾಗಿದ್ದು ಶುಭ ಸೂಚನೆಯಾಗಿದೆ.

ಜಿ.ಎಸ್.ಟಿ ಯಲ್ಲಿ 2017-18, 2018-19 ರ ಸಾಲಿಗೆ ಕ್ಷಮಾದಾನ ಯೋಜನೆ ಪ್ರಕಟಿಸದಿರುವುದು, ಜೂನ್ 220 ಜಿ.ಎಸ್.ಟಿ ಕೌನ್ಸಿಲ್ ಸಭೆಯಲ್ಲಿ ಕ್ಷಮಾದಾನ ಮಂಡಿಸಿದ್ದು, ಆದರೆ ಇದುವರೆಗೂ ಕಛೇರಿಗಳಿಗೆ ಕೌನ್ಸಿಲ್ ಸಭೆಯಲ್ಲಿ ಮಂಡಿಸಿದ ಸೂಚನಾ ಪತ್ರಗಳನ್ನು ಜಿ.ಎಸ್.ಟಿ ಕಛೇರಿಗಳಿಗೆ ತಲುಪಿಸದೇ ಇರುವುದು ನಿಜಕ್ಕೂ ಶೋಚನೀಯ, ಸೂಚನಾ ಪತ್ರಗಳನ್ನು ಜಿ.ಎಸ್.ಟಿ ಕಛೇರಿಗಳಿಗೆ ಕಳಿಸಿಕೊಟ್ಟರೆ ವ್ಯಾಪಾರಸ್ಥರು ಕೈಗಾರಿಕೊದ್ಯಮಿಗಳಿಗೆ ಸರಕು ಮತ್ತು ಸೇವಾ ತೆರಿಗೆ ಕಟ್ಟುವಲ್ಲಿ ಹೆಚ್ಚುವರಿ ಅನುಕೂಲ ಕೊಟ್ಟಂತಾಗುತ್ತದೆ.

ಒಟ್ಟು ವಿತ್ತಿಯ ಕೊರತೆ 4.11%, 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಮುಂಗಡ ಪತ್ರ ಆಶಾದಾಯಕ ಪತ್ರವಾಗಿರುತ್ತದೆ.

– ಜಂಬಗಿ ರಾಧೇಶ್‌, ವಲಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘ.

error: Content is protected !!