5 ಗ್ಯಾರಂಟಿಗಳ ಗುಂಗಿನಲ್ಲಿ ರಾಜ್ಯದ ಅಭಿವೃದ್ಧಿ ಮರೆತ ಕಾಂಗ್ರೆಸ್ ಸರ್ಕಾರ

5 ಗ್ಯಾರಂಟಿಗಳ ಗುಂಗಿನಲ್ಲಿ ರಾಜ್ಯದ ಅಭಿವೃದ್ಧಿ ಮರೆತ ಕಾಂಗ್ರೆಸ್ ಸರ್ಕಾರ

ಕಿಡಿಕಾರಿದ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ, ಜು.22- 5 ಗ್ಯಾರಂಟಿಗಳ ಗುಂಗಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ತೇಲಾಡುತ್ತಾ ರಾಜ್ಯದ ಅಭಿವೃದ್ಧಿಗೆ ಹಣ ಹೊಂದಿಸಲಾಗದೇ ಪರದಾಡುತ್ತಿದೆ ಎಂದು ಬಿಜೆಪಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ  ಹೇಳಿದರು.

ಪಟ್ಟಣದಲ್ಲಿ ತುಂಗಭದ್ರಾ ನದಿಯು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರುಗಳ ಸಮ್ಮುಖದಲ್ಲಿ ನದಿಗೆ ಬಾಗಿನ ಅರ್ಪಿಸಿ, ಅವರು ಮಾತನಾಡಿದರು.

ಪ್ರಕೃತಿ ವಿಕೋಪದಿಂದ ಕಳೆದೆರಡು ವರ್ಷಗಳು ಮಳೆಯಾಗದೇ ರೈತರು ಮುಗಿಲು ನೋಡುತ್ತಿದ್ದು, ಈ ವರ್ಷ ದೇವರ ದಯೆಯಿಂದ ಸಕಾಲಕ್ಕೆ ಮಳೆಯಾಗಿ ನದಿ, ಹಳ್ಳ – ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಬಾಗಿನ ಅರ್ಪಿಸಲು ಸಂತಸವಾಗುತ್ತಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ರಾದ ಬಾಬು ಹೋಬಳಿದಾರ್, ಕೆ.ವಿ.ಶ್ರೀಧರ್, ರಂಗನಾಥ್, ಸತೀಶ್, ಬಿಜೆಪಿ ಮುಖಂಡರುಗಳಾದ ಶಾಂತರಾಜ್ ಪಾಟೀಲ್, ಇಂಚರ ಮಂಜುನಾಥ್, ಮಹೇಶ್ ಹುಡೇದ್, ರಾಜು ಗೌಡ್ರು, ಪೇಟೆ ಪ್ರಶಾಂತ್, ಗುಂಡ ಚಂದ್ರು, ವಕೀಲರಾದ ಉಮಾಕಾಂತ್ ಜೋಯ್ಸ್, ಎಸ್.ಎನ್.ಪ್ರಕಾಶ್, ಪುರೋಹಿತರಾದ ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!