ದತ್ತಾತ್ರೇಯ ಮಂದಿರದ 38ನೇ ವಾರ್ಷಿಕೋತ್ಸವ, ಗುರುಪೂರ್ಣಿಮೆ

ದತ್ತಾತ್ರೇಯ ಮಂದಿರದ 38ನೇ ವಾರ್ಷಿಕೋತ್ಸವ, ಗುರುಪೂರ್ಣಿಮೆ

ದಾವಣಗೆರೆ ಜು. 22- ನಗರದ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿರುವ ಶ್ರೀ ಶಿವಾನಂದ ತೀರ್ಥ ಗುರು ಅಧ್ಯಾತ್ಮ ಮಂದಿರದ ಶ್ರೀ ಗುರು ದತ್ತಾತ್ರೇಯ  ಪ್ರತಿಷ್ಠಾಪನೆಯ 38ನೇ ವಾರ್ಷಿಕೋತ್ಸವ ಹಾಗೂ ಶ್ರೀ ಗುರು ಪೂರ್ಣಿಮೆ ನಿಮಿತ್ತ 108 ಶ್ರೀ ಸತ್ಯದತ್ತ ವ್ರತ ಮಹೋತ್ಸವವು ಸಾಂಪ್ರದಾಯಿಕ ಶ್ರದ್ಧಾ – ಭಕ್ತಿಗಳಿಂದ ನೆರವೇರಿತು. 

ಶ್ರೀ ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ ಹಾಗೂ ಶ್ರೀಮತಿ ರಾಜನಹಳ್ಳಿ ಕಾಂತಲಕ್ಷ್ಮಮ್ಮ ಆರ್.ವಿ. ಗೋಪಾಲಕೃಷ್ಣ ಶ್ರೇಷ್ಟಿ ವ್ಯವಸ್ಥಾಪನೆಯಲ್ಲಿ ಅಧ್ಯಾತ್ಮ ಮಂದಿರದ ಪ್ರಮುಖರುಗಳಾದ ಆರ್.ಎಸ್. ನಾರಾಯಣಸ್ವಾಮಿ,  ಆರ್ ಜಿ  ನಾಗೇಂದ್ರ ಪ್ರಸಾದ್, ಶ್ರೀಧರ ಶ್ರೇಷ್ಠಿ,  ಆರ್.ಜಿ. ಶ್ರೀನಿವಾಸ್ ಮೂರ್ತಿ, ಬದರಿ ಪ್ರಸಾದ್, ದತ್ತಮೂರ್ತಿ, ಸೌಖ್ಯ ಸಾಗರ್, ಗೀತಾ ಶ್ರೀಧರ್ ಮುಂತಾದವರು ಭಾಗವಹಿಸಿದ್ದರು.

ವೇ. ಶಿವರಾಮ ಶಾಸ್ತ್ರಿ ಮುಂತಾದವರ ಪೌರೋಹಿತ್ಯದಲ್ಲಿ ಹೂವಿನ ಅಲಂಕಾರ ಸೇವೆಯನ್ನು ಶ್ರೀ ಶಿರಡಿ ಸಾಯಿಬಾಬಾ ಭಜನಾ ಮಂಡಳಿ ಹಾಗೂ ಗಿರೀಶ್ ನೆರವೇರಿಸಿದ್ದರು. ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್ ವಿಶೇಷ  ಆಹ್ವಾನಿತರಾಗಿ ದ್ದರು. ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ದಕ್ಷಿಣದ ವತಿಯಿಂದ ಗುರುಪೂರ್ಣಿಮೆ ಪ್ರಸಾದ ವಿತರಣೆ ನೆರವೇರಿತು. ಡಾ. ಎಸ್.ಹೆಚ್. ಸುಜಿತ್ ಕುಮಾರ್ ಉಪಸ್ಥಿತರಿದ್ದರು.

error: Content is protected !!