ರಾಣೇಬೆನ್ನೂರು : ನಾಮದೇವ ಸಿಂಪಿ ಸಮಾಜದಿಂದ ಏಕಾದಶಿ

ರಾಣೇಬೆನ್ನೂರು : ನಾಮದೇವ ಸಿಂಪಿ ಸಮಾಜದಿಂದ ಏಕಾದಶಿ

ರಾಣೇಬೆನ್ನೂರು, ಜು. 18 – ಇಲ್ಲಿನ ನಾಮದೇವ ಸಿಂಪಿ ಸಮಾಜದವರು ವಿಠಲನ ಪ್ರಿಯ ದಿನವಾದ ಬುಧವಾರವೇ ಏಕಾದಶಿ ಬಂದಿದ್ದು, ಭಕ್ತರು ಅತ್ಯಂತ ಶ್ರದ್ಧಾಭಕ್ತಿಯಿಂದ ಪ್ರಥಮ ಆಷಾಢ ಕಾರ್ಯಕ್ರಮವನ್ನು ವಿಠಲ ರುಕ್ಮಾಯಿ ದೇವಸ್ಥಾನದಲ್ಲಿ  ಫಲ ಪಂಚಾಮೃತ ಅಭಿಷೇಕ ಮಾಡಿದರು.  

ನೆರೆದಿದ್ದ ಸಮಸ್ತ ಭಕ್ತರಿಗೆ ಸಿಹಿ ಪ್ರಸಾದ ವಿತರಿಸಲಾಯಿತು. ಮಗುವಿಗೆ ವಿಠಲನ ಶೃಂಗಾರ ಮಾಡಲಾಯಿತು. ಮಹಾಮಂಗಳಾರತಿ, ನವಗ್ರಹ ಪೂಜಾ ಮುಂತಾದ  ಎಲ್ಲ ಧಾರ್ಮಿಕ ವಿಧಿ ವಿಧಾನಗಳಲ್ಲಿ ಸಮಾಜದ ಅಧ್ಯಕ್ಷ ಪ್ರವೀಣ ಕೋಪರ್ಡೆ, ಗದಿಗೆಪ್ಪ ಬಗಾಡೆ, ಸಮಾಜದ ಭಕ್ತರು ಪಾಲ್ಗೊಂಡಿದ್ದರು.

error: Content is protected !!