‘108 ತುರ್ತು ಆಂಬ್ಯುಲೆನ್ಸ್’ ವಾಹನಕ್ಕೆ ಶಾಸಕ ಬಸವಂತಪ್ಪ ಚಾಲನೆ

‘108 ತುರ್ತು ಆಂಬ್ಯುಲೆನ್ಸ್’  ವಾಹನಕ್ಕೆ ಶಾಸಕ ಬಸವಂತಪ್ಪ ಚಾಲನೆ

ಮಾಯಕೊಂಡ, ಜು.9-  ಬಡವರು ಮತ್ತು ನಿರ್ಗತಿಕ ರೋಗಿಗಳಿಗೆ 108 ತುರ್ತು ಸೇವೆಯ ಆಂಬ್ಯುಲೆನ್ಸ್ ವಾಹನವು ಅವಶ್ಯಕವಾಗಿದ್ದು,   ಹೊಸ ವಾಹನ ಸದ್ಬಳಕೆಯಾಗಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಕ್ಷೇತ್ರದ ವ್ಯಾಪ್ತಿಯ ಬಸವಾಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ಈಚೆಗೆ ಹೊಸ  ಆಂಬ್ಯುಲೆನ್ಸ್ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವೈದ್ಯಕೀಯ ಸೇವೆಗಳ ತುರ್ತು ಅಗತ್ಯ ಚಿಕಿತ್ಸೆಯ ತೊಡಕುಗಳನ್ನು ಕಡಿಮೆ ಮಾಡಲು ಮತ್ತು ರೋಗಿಯು ಬದುಕುಳಿಯುವ ಸಾಧ್ಯತೆಗಳನ್ನು ಹೆಚ್ಚಿಸಲು ಆಮ್ಲಜನಕ ಚಿಕಿತ್ಸೆ,  ಸುಧಾರಿತ ಔಷಧ ಮತ್ತು ಗರಿಷ್ಠ ಸಮಯದ ಬಳಕೆಗಾಗಿ ತುರ್ತು ವಾಹನ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ತುರ್ತು ಸಂದರ್ಭಗಳಲ್ಲಿ  ಈ ವಾಹನ ಬಳಸಿ ಸೌಲಭ್ಯ ಕಲ್ಪಿಸುವತ್ತ ಆಸ್ಪತ್ರೆಯ ವೈದ್ಯಾಧಿಕಾರಿಗಳು ಗಮನ ಹರಿಸಬೇಕೆಂದರು.

ತಹಶೀಲ್ದಾರ್ ಪಿ.ಎಸ್. ಎರಿಸ್ವಾಮಿ ಮಾತನಾಡಿ, ಈ ತುರ್ತು ಆಂಬ್ಯುಲೆನ್ಸ್ ಸೇವೆಯು 24/7 ನಿರಂತರ ಉಚಿತ ಸೇವೆಯಾಗಿದ್ದು, ಯಾವುದೇ ತುರ್ತು ಸಂದರ್ಭದಲ್ಲಿ 108 ಸಂಖ್ಯೆಗೆ ಡಯಲ್ ಮಾಡುವ ಮೂಲಕ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಬಿ.ಜಿ.ಸಚಿನ್, ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಗ್ರಾಪಂ ಸದಸ್ಯರಾದ ಸೈಯದ್ ಹಿದಾಯಿತ್, ಹರೋಸಾಗರ ಎ.ಕೆ.ಗಿರೀಶ್, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಇ.ಸತ್ಯ ಸುಂದರ, ಮುಖಂಡರಾದ ಜಿ.ಪ್ರಕಾಶ್, ಬಿ.ಮಾರುತಿ, ಆಂಬ್ಯುಲೆನ್ಸ್ ಸ್ಟಾಫ್ ನರ್ಸ್ ವಿ.ರಾಮಕೃಷ್ಣ, ಚಾಲಕರಾದ ಎಂ.ಹಾಲೇಶ್, ಆರ್.ದುರ್ಗೇಶ್ ಸೇರಿದಂತೆ, ಗ್ರಾಮಸ್ಥರು ಹಾಜರಿದ್ದರು.

error: Content is protected !!