ವಿಜಯನಗರ ಬಡಾವಣೆಯಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ವಿಜಯನಗರ ಬಡಾವಣೆಯಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ದಾವಣಗೆರೆ, ಜು.2- ನಗರದ ಆರ್‌ಟಿಓ ಆಫೀಸ್ ಹತ್ತಿರವಿರುವ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ವಿಜಯನಗರ ಬಡಾವಣೆ 3ನೇ ಕ್ರಾಸ್‌ನಲ್ಲಿ ಮಹಾನಗರ ಪಾಲಿಕೆ ವತಿಯಿಂದ ತೆರಿಗೆ, ಹಣಕಾಸು, ಅಪೀಲು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಪಾಲಿಕೆ ಸದಸ್ಯರಾದ ಹೆಚ್.ಉದಯಕುಮಾರ್ ಅವರು ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗುತ್ತಿಗೆದಾರರು, ವಿಜಯನಗರ ಬಡಾವಣೆಯ ನಿವಾಸಿಗಳಾದ ಜಿ.ವಿ.ಬ್ರಹ್ಮಚಾರ್, ಮಂಜುನಾಥ್, ಹನುಮಂತು, ಮಲ್ಲಣ್ಣ, ವೀರಯ್ಯ ಸ್ವಾಮಿ, ಜನತಾವಾಣಿ ಪ್ರತಿನಿಧಿ ಜಿ.ಎಸ್.ವಿರೂಪಾಕ್ಷಪ್ಪ ಹಾಗೂ ಶ್ರೀಮತಿ ಪ್ರತಿಮ, ಶ್ರೀಮತಿ ಜಿ.ವಿ.ಸುಮಂಗಲಾ, ಶ್ರೀಮತಿ ನೇತ್ರಮ್ಮ ಮತ್ತಿತರರು ಉಪಸ್ಥಿತರಿದ್ದರು.

error: Content is protected !!