ಹೊನ್ನೂರು ಗೊಲ್ಲರಹಟ್ಟಿ ವಾಸವಿ ವಿದ್ಯಾಲಯದಲ್ಲಿ ಅಕ್ಷರಾಭ್ಯಾಸ

ಹೊನ್ನೂರು ಗೊಲ್ಲರಹಟ್ಟಿ ವಾಸವಿ ವಿದ್ಯಾಲಯದಲ್ಲಿ ಅಕ್ಷರಾಭ್ಯಾಸ

ದಾವಣಗೆರೆ, ಜು. 2 – ಹೊನ್ನೂರು ಗೊಲ್ಲರಹಟ್ಟಿ ಬಳಿಯ ಶ್ರೀ ವಾಸವಿ ರಾಷ್ಟ್ರೀಯ ವಿದ್ಯಾಲಯದಲ್ಲಿ ಅಕ್ಷರ ಎಂದರೆ ನಾಶವಿಲ್ಲದ್ದು ಎಂಬಂತೆ ಅಕ್ಷರಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲಾ ನಾಳೆ ಫಲ ಕೊಡುತ್ತವೆ ಎಂಬಂತೆ ಪ್ರಹ್ಲಾದ್ ಜೋಷಿ ಶಾಸ್ತ್ರಿಗಳು ಈ ಕಾರ್ಯಕ್ರಮದಲ್ಲಿ ಅಕ್ಷರಾಭ್ಯಾಸ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ
ಹೆಚ್. ಅನಿಲ್‌ಕುಮಾರ್, ಕಾರ್ಯದರ್ಶಿ ಟಿ.ಎಂ. ಉಮಾಪಯ್ಯ, ಖಜಾಂಚಿ ಪ್ರವೀಣ್ ಹುಲ್ಲುಮನೆ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಶ್ರೀಮತಿ ಬಿ. ರಶ್ಮಿ, ಶಿಕ್ಷಕ, ಶಿಕ್ಷಕೇತರರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

error: Content is protected !!