ಮೈದುಂಬಿ ಹರಿಯುತ್ತಿರುವ ತುಂಗಭದ್ರೆ ವೀಕ್ಷಣೆಗೆ ಸಾರ್ವಜನಿಕರ ದಂಡು

ಮೈದುಂಬಿ ಹರಿಯುತ್ತಿರುವ ತುಂಗಭದ್ರೆ ವೀಕ್ಷಣೆಗೆ ಸಾರ್ವಜನಿಕರ ದಂಡು

ಹರಿಹರ, ಜೂ.29- ರಾಜ್ಯದಾದ್ಯಂತ ಸುರಿ ಯುತ್ತಿರುವ ಮುಂಗಾರು ಮಳೆಯಿಂದಾಗಿ ನಗರದ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚು ಆಗುತ್ತಿದ್ದಂತೆ, ಹರಿಯುವ ನೀರಿನ ರಮಣೀಯ ದೃಶ್ಯಗಳನ್ನು ನೋಡಲಿಕ್ಕೆ ಸಾರ್ವಜನಿಕರ ದಂಡು ತುಂಗಭದ್ರಾ ನದಿಯ ಕಡೆಗೆ ಆಗಮಿಸುತ್ತಿದೆ.

ಮೈದುಂಬಿ ಹರಿಯುವ ನೀರಿನ ಹತ್ತಿರ ನಿಂತು ಕುಟುಂಬ ಸದಸ್ಯರೊಂದಿಗೆ ಫೋಟೋ ಕ್ಲಿಕ್ ಮಾಡಿ ಕೊಂಡು ಸಂತಸ ಹಂಚಿಕೊಳ್ಳುತ್ತಿರುವುದು ತುಂಗ ಭದ್ರಾ ನದಿ ದಂಡೆಯ ಶ್ರೀ ರಾಘವೇಂದ್ರಸ್ವಾಮಿ ಮಠದ ಹಿಂಬದಿಯಲ್ಲಿ ನೂತನವಾಗಿ ನಿರ್ಮಾಣ ವಾಗುತ್ತಿರುವ ತುಂಗಾರತಿಗೆ ಸಿದ್ದತೆಯ ಸ್ಥಳದಲ್ಲಿ ಕಂಡು ಬಂದಿತು.  ನದಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚು ಆಗುತ್ತಿದ್ದು, ಭಾನುವಾರ, ವಾರದ ರಜಾ ದಿನ ಆಗಿರುವುದರಿಂದ ನದಿ ವೀಕ್ಷಿಸಲು ನಗರ ಸೇರಿದಂತೆ ಅಕ್ಕ ಪಕ್ಕದ ನಗರದ ಜನರು ಸಹ ಆಗಮಿಸುವ ನಿರೀಕ್ಷೆ ಇರುವುದರಿಂದ, ನದಿ ಹತ್ತಿರ ಯಾವುದೇ ರೀತಿಯ ಅವಘಡ ನಡೆಯದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಮುಂಜಾ ಗ್ರತಾ ಕ್ರಮವಾಗಿ ನದಿಯ ಹತ್ತಿರ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿದರೆ ಒಳ್ಳೆಯದು ಎಂದು ಸಾರ್ವಜನಿಕರು  ಆಗ್ರಹಿಸಿದ್ದಾರೆ.

error: Content is protected !!