ದಾವಣಗೆರೆ, ಜೂ. 22- ನಗರದ ವಕೀಲರ ಸಂಘದಿಂದ ನಿನ್ನೆ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿಮಾಚಲ ಪ್ರದೇಶ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನಾರಾಯಣಸ್ವಾಮಿ ಅವರನ್ನು ವಕೀಲರ ಸಹಕಾರ ಸಂಘದ ವತಿಯಿಂದ ಸನ್ಮಾನಿಸ ಲಾಯಿತು. ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷ ಹೆಚ್.ದಿವಾಕರ್, ಉಪಾಧ್ಯಕ್ಷ ಗವಿಯಪ್ಪ, ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್, ನಿರ್ದೇಶಕರಾದ ಸಿ.ಜಿ.ರಾಜಶೇಖರ್, ಏ.ಕೆ.ಹಾಲಪ್ಪ, ಡಿ.ಎನ್. ಬಸವರಾಜ್, ಸಿ.ಪಿ. ಅನಿತಾ, ಜಿ.ಕೆ.ಬಸವ ರಾಜ್, ಕಾರ್ಯದರ್ಶಿ ನಾಗಯ್ಯ ಮತ್ತು ಇತರರು ಉಪಸ್ಥಿತರಿದ್ದರು.
ನ್ಯಾ. ನಾರಾಯಣಸ್ವಾಮಿ ಅವರಿಗೆ ವಕೀಲರ ಸಹಕಾರ ಸಂಘದಿಂದ ಗೌರವ
![16 narayanaswamy 23.06.2024 ನ್ಯಾ. ನಾರಾಯಣಸ್ವಾಮಿ ಅವರಿಗೆ ವಕೀಲರ ಸಹಕಾರ ಸಂಘದಿಂದ ಗೌರವ](https://janathavani.com/wp-content/uploads/2024/06/16-narayanaswamy-23.06.2024.jpg)