ಹರಿಹರ, ಜೂ,15- ನಗರದ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ ಅವರು, ಶುಕ್ರವಾರ ಬೆಳಗ್ಗೆ ನಿಧನ ಹೊಂದಿದರು. ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆಯನ್ನು ಶನಿವಾರ ಬೆಳಗ್ಗೆ ಠಾಣೆಯ ಆವರಣದಲ್ಲಿ ಮಾಡಲಾಗಿತ್ತು. ಪಿಎಸ್ಐ ದೇವಾನಂದ್, ಎಎಸ್ಐ ಮನಸೂರ ಆಹ್ಮದ್, ಪೊಲೀಸ್ ಸಿಬ್ಬಂದಿಗಳಾದ ಸತೀಶ್ ನರಗನಹಳ್ಳಿ, ಚೆನ್ನಕೇಶವ, ರವಿಕುಮಾರ್, ಮಂಜುನಾಥ್ ಬನ್ನಿಕೋಡು , ಸತೀಶ್, ದೇವರಾಜ್, ನಟರಾಜ್, ಶ್ರೀನಿವಾಸ್, ಸುಶೀಲಮ್ಮ, ಮಂಜುನಾಥ್ ಹೆಚ್, ನೀಲುಮೂರ್ತಿ, ನಾಗರಾಜ್, ಜಿ. ಮಂಜುನಾಥ್, ಸುಜಾತ, ಪವಿತ್ರ, ಕವಿತಾ, ಸಿದ್ದೇಶ್, ಕುಮಾರ್, ರಿಜ್ವಾನ್, ರಾಧಾಕೃಷ್ಣ, ವಕೀಲ ರುದ್ರಗೌಡ, ಶಿವಣ್ಣ ಬಂಕಾಪುರ, ಸನಾವುಲಾ ಸಾಬ್, ಉಮೇಶ್, ಮಹೇಶ್, ಸರಪದ್, ಚಂದ್ರು ಇತರರು ಅಂತಿಮ ದರ್ಶನ ಪಡೆದರು. ಮೃತ ಪೊಲೀಸ್ ಪೇದೆಯ ಪತ್ನಿ ಮಂಜುಳಾ ಅವರು ದಾವಣಗೆರೆ ಮಹಿಳಾ ಠಾಣೆಯ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹರಿಹರ: ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ ನಿಧನ
![16.06.2024 HRR ಹರಿಹರ: ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ ನಿಧನ](https://janathavani.com/wp-content/uploads/2024/06/16.06.2024-HRR--860x387.jpg)