ಹಿರಿಯ ವನಿತೆಯರ ಆನಂದ ಧಾಮದಲ್ಲಿ ಸೀರೆ, ಬೆಡ್‌ಶೀಟ್ ವಿತರಣೆ

ಹಿರಿಯ ವನಿತೆಯರ ಆನಂದ ಧಾಮದಲ್ಲಿ ಸೀರೆ, ಬೆಡ್‌ಶೀಟ್ ವಿತರಣೆ

94ರ ಸಂಭ್ರಮದಲ್ಲಿ ಎಸ್ಸೆಸ್ : ದಿನೇಶ್ ಶೆಟ್ಟಿ ನೇತೃತ್ವದಲ್ಲಿ ಸೇವಾ ಕಾರ್ಯಕ್ರಮ

ದಾವಣಗೆರೆ, ಜೂ. 14 – ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರ 94ನೇ ವರ್ಷದ ಜನ್ಮ ದಿನದ ಅಂಗವಾಗಿ ಇಂದು ನಗರದ ವನಿತಾ ಸಮಾಜದ ಹಿರಿಯ ವನಿತೆಯರ ಆನಂದಧಾಮದಲ್ಲಿನ ಹಿರಿಯ ವನಿತೆಯರಿಗೆ ಸೀರೆ ಮತ್ತು ಬೆಡ್ ಸೀಟ್ ಗಳನ್ನು ವಿತರಿಸಿ ಸಿಹಿ ಊಟ ನೀಡಲಾಯಿತು.

93 ವರ್ಷಗಳ ಸಾರ್ಥಕ ಜೀವನ ನಡೆಸಿರುವ ಎಸ್ಸೆಸ್ 94ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದಕ್ಕೆ ತುಂಬು ಹೃದಯದ ಶುಭಾಶಯ ಕೋರಿದ ಹಿರಿಯ ವನಿತೆಯರು,  ಎಸ್ಸೆಸ್ ಜೀವನ ಆದರ್ಶಮಯ ವಾಗಿದ್ದು, ಅವರಿಗೆ ದೇವರು ದೀರ್ಘಾಯುಷ್ಯ ನೀಡಲಿ ಎಂದು ಹಾರೈಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಡಿಸಿಸಿ ಕಾರ್ಯದರ್ಶಿ  ಎಸ್. ಮಲ್ಲಿಕಾರ್ಜುನ್, ಉತ್ತರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್, ಅಯೂಬ್ ಪೈಲ್ವಾನ್, ವನಿತಾ ಸಮಾಜದ ಲತೀಕಾ ಶೆಟ್ಟಿ, ಸುನಿತಾ ಇಂಧೂಧರ್, ಮುಖಂಡ ಸುರಭಿ ಶಿವಮೂರ್ತಿ ಮತ್ತಿತರರು ಮಾತನಾಡಿದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದ್ರಾಕ್ಷಾಯಣಮ್ಮ, ರಾಜೇಶ್ವರಿ, ಮಂಗಳಮ್ಮ, ಮಂಜಮ್ಮ, ಶುಭಮಂಗಳ, ರಾಜು ಭಂಡಾರಿ, ಯುವರಾಜ್, ಸಲ್ಮಾಬಾನು, ಕಮಲಮ್ಮ, ಹರೀಶ್ ವನಿತಾ ಸಮಾಜದ ಸುನೀತಾ ವೀರನಾರಾಯಣ, ಶೀಲಾ ನಲ್ಲೂರು ಇನ್ನೂ ಮುಂತಾದವರು ಇದ್ದರು.

error: Content is protected !!