ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ವರ್ಗ – ಬೀಳ್ಕೊಡುಗೆ

ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ವರ್ಗ – ಬೀಳ್ಕೊಡುಗೆ

ದಾವಣಗೆರೆ, ಜೂ.13 – ಲೋಕಸಭಾ ಚುನಾವಣಾ ನಿಮಿತ್ತ ದಾವಣಗೆರೆ ಜಿಲ್ಲೆಗೆ ವರ್ಗಾವಣೆಯಾಗಿ ಆಗಮಿಸಿದ್ದ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ಅವರಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ., ಅತ್ಯುತ್ತಮವಾದ ಅಧಿಕಾರಿಗಳ ತಂಡ ಇದ್ದುದರಿಂದ ಲೋಕಸಭಾ ಚುನಾವಣೆಯನ್ನು ಯಾವುದೇ ಸಮಸ್ಯೆಗಳು ಬಾರದಂತೆ ಮತ್ತು ಸುಲಲಿತವಾಗಿ ನಿರ್ವಹಣೆ ಮಾಡಲು ಸಾಧ್ಯವಾಯಿತು. ಚುನಾವಣಾ ಸಂದರ್ಭದಲ್ಲಿ ಹಲವು ಅಧಿಕಾರಿಗಳ ವರ್ಗಾವಣೆ ಸಾಮಾನ್ಯವಾಗಿರುತ್ತದೆ. ಆದರೂ ಸಹ ಹೊಸದಾಗಿ ಜಿಲ್ಲೆಗೆ ಆಗಮಿಸಿ, ಎಲ್ಲರೊಟ್ಟಿಗೆ ಅತ್ಯುತ್ತಮ ವಾದ ಕೆಲಸ ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಯವರ ಕೆಲಸವನ್ನು ಪ್ರಶಂಸೆ ಮಾಡಿದರು. 

ಈ ವೇಳೆ ಚುನಾವಣಾ ನಿಮಿತ್ತ ಜಿಲ್ಲೆಯಿಂದ ಬೆಳಗಾವಿಗೆ ವರ್ಗಾವಣೆ ಯಾಗಿ ತೆರಳಿದ್ದ ಪಿ.ಎನ್.ಲೋಕೇಶ್ ಅವರು ವರದಿ ಮಾಡಿಕೊಂಡಿದ್ದು, ಅ ವರನ್ನು ಸ್ವಾಗತಿಸಲಾಯಿತು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿ ಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿಯ ವರು, ಇಲ್ಲಿನ ಸಿಬ್ಬಂದಿಯವರು ನನ್ನೊಟ್ಟಿಗೆ ಹಗಲಿರಳು ಕೆಲಸ ಮಾಡಿದರು. ಯಾವುದೇ ಒತ್ತಡವಿಲ್ಲದೇ ಎಲ್ಲರೊ ಟ್ಟಿಗೆ ಕೆಲಸ ಮಾಡಲು ಸಹಕಾರಿಯಾಗಿದ್ದು, ಸೇವಾ ಅವಧಿಯಲ್ಲಿ ಅವಿಸ್ಮರಣೀಯ ದಿನಗಳಾಗಿವೆ ಎಂದರು. 

ಉಪವಿಭಾಗಾಧಿಕಾರಿ ಶ್ರೀಮತಿ ಎನ್. ದುರ್ಗಶ್ರೀ, ಭೂಸ್ವಾಧೀನಾಧಿಕಾರಿ ಉದಯಕುಮಾರ್ ಕುಂಬಾರ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಮಠದ್, ಸ್ಮಾರ್ಟ್ ಸಿಟಿ ಎಂ.ಡಿ. ವೀರೇಶ್ ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: Content is protected !!