ಶಿಕ್ಷಕರ ಸಮಸ್ಯೆ ನೀಗಲು ಕಾಂಗ್ರೆಸ್ ಸರ್ಕಾರ ಬದ್ದ

ಶಿಕ್ಷಕರ ಸಮಸ್ಯೆ ನೀಗಲು ಕಾಂಗ್ರೆಸ್ ಸರ್ಕಾರ ಬದ್ದ

ಶಾಸಕ ಕೆ.ಎಸ್.ಬಸವಂತಪ್ಪ

ಮಾಯಕೊಂಡ, ಮೇ 31- ಶಿಕ್ಷಕರ ಸಮಸ್ಯೆ ನೀಗಲು ಕಾಂಗ್ರೆಸ್ ಬದ್ದವಾಗಿದ್ದು, ಶಿಕ್ಷಕರು ವಿಧಾನ ಪರಿಷತ್ ಚುನಾವಣೆಯಲ್ಲಿ ಡಿ.ಟಿ ಶ್ರೀನಿವಾಸ್ ಅವರಿಗೆ ಮತ ದಾನ ಮಾಡಬೇಕು ಎಂದು ಕೆ.ಎಸ್. ಬಸವವಂತಪ್ಪ ಮನವಿ ಮಾಡಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಹಲವು ಹಳ್ಳಿಗಳಲ್ಲಿ ವಿಧಾನ ಪರಿಷತ್ ಅಭ್ಯರ್ಥಿ ಶ್ರೀನಿವಾಸ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.

ಶಿಕ್ಷಕರ ವೇತನ ತಾರತಮ್ಯ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾಂಗ್ರೆಸ್ ಸದಾ ಸಿದ್ದವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾದ ಗಲೆಲ್ಲಾ ಕಾಲಕಾಲಕ್ಕೆ ವೇತನ, ತುಟ್ಟಿಭತ್ಯೆ ನಿಗದಿ ಮಾಡಿದೆ.  ವೇತನ ಆಯೋಗಗಳ ಶಿಫಾರಸ್ಸಿನಂತೆ ವೇತನ ಜಾರಿಗೊಳಿಸಿದೆ. ದಕ್ಷತೆ ಹೆಚ್ಚಿಸಿ, ಗೌರವದ ಬದುಕು ನೀಡಿದೆ. ಎಲ್ಲಾ ವರ್ಗದ ನೌಕರರ ಹಿತರಕ್ಷಣೆ ಮಾಡಿದೆ. ಆಡಳಿತ ಪಕ್ಷದ ವಿಧಾನ ಪರಿಷತ್ ಸದಸ್ಯರಿದ್ದರೆ, ಹೆಚ್ಚು ಅನುಕೂಲವಾಗುತ್ತದೆ. ನಿವೃತ್ತ ನೌಕರರ ಜೀವನ ಸುಧಾರಿಸಿ ಗೌರವದ ಬದುಕು ಕಲ್ಪಿಸುವ ಸದುದ್ದೇಶ ದಿಂದ, ಒಪಿಎಸ್ ಜಾರಿಗೊಳಿಸುವ ಭರವಸೆ ಯನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಶಿಕ್ಷಕರು ಸೇರಿದಂತೆ ಎಲ್ಲಾ ನೌಕರರ ಹಿತಕಾಯಲು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು‌ ಮನವಿ ಮಾಡಿದರು.

ಕ್ಷೇತ್ರ ವ್ಯಾಪ್ತಿಯ ಆಲೂರು ಹಟ್ಟಿ, ಮೆಳ್ಳೆಕಟ್ಟೆ, ಅಣಜಿ, ಕಂದನಕೋವಿ, ಆನಗೋಡು ಗ್ರಾಮದ ಪ್ರೌಢಶಾಲೆಗಳಿಗೆ ತೆರಳಿ ಮತಯಾಚಿ ಸಲಾಯಿತು. ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಶೇಖರ್, ತಾಲ್ಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಶಿವಣ್ಣ, ಡಿ.ಟಿ.ಹನುಂಮತಪ್ಪ, ಪಾಟೀಲ್ ಮತ್ತಿತರರಿದ್ದರು.

error: Content is protected !!