ರಾಣೇಬೆನ್ನೂರು ಕೃಷಿ ಅಧಿಕಾರಿಗಳ ದಾಳಿ 5 ಲಕ್ಷ ರೂ. ಮೌಲ್ಯದ ನಕಲಿ ಬೀಜ ವಶ

ರಾಣೇಬೆನ್ನೂರು ಕೃಷಿ ಅಧಿಕಾರಿಗಳ ದಾಳಿ 5 ಲಕ್ಷ ರೂ. ಮೌಲ್ಯದ ನಕಲಿ ಬೀಜ ವಶ

ರಾಣೇಬೆನ್ನೂರು, ಮೇ 30- ತಾಲ್ಲೂಕಿನ ಅಂತರವಳ್ಳಿ ಗ್ರಾಮದ ಕೃಷ್ಣಪ್ಪ ಒಡೇರಹಳ್ಳಿ ಎಂಬುವವರ ಮನೆ ಮೇಲೆ ದಾಳಿ ಮಾಡಿದ ಕೃಷಿ ಇಲಾಖೆ ಅಧಿಕಾರಿಗಳು, ಸುಮಾರು 5 ಲಕ್ಷ ರೂ. ಮೌಲ್ಯದ, 50 ಕೆಜಿ ತೂಕದ 54 ಚೀಲಗಳು, ಒಟ್ಟು 27 ಕ್ವಿಂಟಾಲ್ ಮೆಕ್ಕೆಜೋಳದ ನಕಲಿ ಬೀಜಗಳನ್ನು ವಶಪಡಿಸಿಕೊಂಡಿದ್ದಾರೆ.

ಕೃಷಿ ನಿರ್ದೇಶಕರಾದ ಶಾಂತಮಣಿ, ಸಹಾಯಕ ನಿರ್ದೇಶಕ ಕೆ.ಎನ್ ಮಹಾರಡ್ಡಿ, ಅಧಿಕಾರಿ ಬಸವರಾಜ  ಮುರುಗಣ್ಣನವರ, ವೀರೇಶ ಜಿ.ಎಂ. ಶಿವಾನಂದ ಹಾವೇರಿ  ಈ ದಾಳಿ ನಡೆಸಿರುತ್ತಾರೆ.  ಹಲಗೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!