ಈ ಬಾರಿಯಾದರೂ 22 ಕೆರೆ ತುಂಬಿಸಿ ಇಂಜಿನಿಯರ್‌ಗಳಿಗೆ ಶಾಸಕರ ತಾಕೀತು

ಈ ಬಾರಿಯಾದರೂ 22 ಕೆರೆ ತುಂಬಿಸಿ  ಇಂಜಿನಿಯರ್‌ಗಳಿಗೆ ಶಾಸಕರ ತಾಕೀತು

ದಾವಣಗೆರೆ, ಮೇ 29 – ಈ ಬಾರಿ ಅತೀ ಹೆಚ್ಚು ಮುಂಗಾರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಅಧಿಕಾರಿಗಳು ಈಗಲೇ ಜಾಗೃತರಾಗಿ ತುಂಗಭದ್ರಾ ನದಿಯಿಂದ 22 ಕೆರೆಗಳ ಏತ ನೀರಾವರಿ ಯೋಜನೆಯ ವ್ಯಾಪ್ತಿಯ ಕೆರೆಗಳನ್ನು ಭರ್ತಿ ಮಾಡಿಸಿ, ರೈತರ ನೆರವಿಗೆ ಧಾವಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ ನೀಡಿದರು.

ಹರಿಹರ ಸಮೀಪವಿರುವ 22 ಕೆರೆಗಳ ಏತ ನೀರಾವರಿ ಯೋಜನೆಯ  ಜಾಕ್ವೆಲ್ ಗೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಬಂಧಪಟ್ಟ ಇಂಜಿನಿಯರ್‌ಗಳು ಈ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಯುವಂತೆ ನೋಡಿಕೊಳ್ಳಬೇಕು. ಈ ಯೋಜನೆಯ ಏನೇ ಸಮಸ್ಯೆಗಳು ಇದ್ದರೂ ಈಗಲೇ ಸರಿಪಡಿಸಿಕೊಳ್ಳಬೇಕು. ಮುನ್ನೆಚ್ಚರಿಕೆ ಕ್ರಮ ವಹಿಸಬೇಕು.  ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ 22 ಕೆರೆಗಳ ಏತ ನೀರಾವರಿ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ಮುದೇಗೌಡ್ರು ಗಿರೀಶ್,  ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ.ಚಂದ್ರಣ್ಣ, ಜನತಾ ಬಜಾರ್ ಗುರುಸ್ವಾಮಿ, ಶಂಭಣ್ಣ, ಕೊಟ್ರೇಶ್ ನಾಯ್ಕ್ ಸೇರಿದಂತೆ, ಈ ಭಾಗದ ರೈತರು ಹಾಜರಿದ್ದರು.

error: Content is protected !!