ಹೊನ್ನಾಳಿ : ಜೂ.2ರಂದು ಪಂಚಮಸಾಲಿ ಸಮಾಜದ ಪ್ರತಿಭಾ ಪುರಸ್ಕಾರ

ಹೊನ್ನಾಳಿ : ಜೂ.2ರಂದು ಪಂಚಮಸಾಲಿ ಸಮಾಜದ ಪ್ರತಿಭಾ ಪುರಸ್ಕಾರ

ಹೊನ್ನಾಳಿ, ಮೇ 29-  ತಾಲ್ಲೂಕು ಪಂಚಮಸಾಲಿ ಸಮಾಜವು ಜೂನ್ 2 ರ ಭಾನುವಾರ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿರುವ ಪಂಚಮಸಾಲಿ ಸಮಾಜದ  ಎಸ್‍ಎಸ್‍ಎಲ್‍ಸಿ, ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ  ಹೇಳಿದರು.

ಅವರು ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಂದು ಹಮ್ಮಿಕೊಂಡಿದ್ದ ಪಂಚಮಸಾಲಿ ಸಮಾಜದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಮಾರಂಭಕ್ಕೆ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಪೀಠದ ಧರ್ಮದರ್ಶಿ ಬಿ.ಸಿ. ಉಮಾಪತಿ ಮಾಜಿ ಸಚಿವ ಮುರುಗೇಶ್ ನಿರಾಣಿ, ಪಂಚಮಸಾಲಿ ರಾಜ್ಯ ಕಾರ್ಯಾಧ್ಯಕ್ಷ ಸೋಮನಗೌಡ ರಾಜ್ಯ ಗಡಿ ನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ್ ರವರು ಆಗಮಿಸುವುದಾಗಿ ತಿಳಿಸಿದರು.

ಎಸ್‍ಎಸ್‍ಎಲ್‍ಸಿ ಹಾಗು ಪಿಯುಸಿಯಲ್ಲಿ ಶೇ 60% ಕ್ಕೂ ಹೆಚ್ಚು ಅಂಕ ಪಡೆದವರನ್ನು ಹಾಗು ನಿವೃತ್ತ ನೌಕರರನ್ನು ಸನ್ಮಾನಿಸಲಾಗುವುದು. ಸಮಾರಂಭದಲ್ಲಿ ಪೀಠದ ಆಡಳಿತಾಧಿಕಾರಿ ಡಾ. ರಾಜಕುಮಾರ್, ಪಟ್ಟಣಶೆಟ್ಟಿ ಪರಮೇಶ, ಕುಂಕೋದ ಸೋಮಣ್ಣ ಕುಂಕೋದ  ಹಾಲೇಶ, ಚನ್ನಮುಂಬಾಪುರದ ಚಂದ್ರಶೇಖರ, ಒಡೆರಹತ್ತೂರು ಅಶೋಕ್ ಮಾತನಾಡಿದರು.

ಪೇಟೆ ಮಲ್ಲೇಶ್, ಮಠದ ಬಸಣ್ಣ ಮೆಕ್ಕೇಜೋಳ ಚನ್ನೇಶ, ಕೆ.ವಿ. ಪ್ರಸನ್ನ, ಮೃತ್ಯುಂಜಯ ಪಾಟೀಲ್, ಪಲ್ಲವಿ ರಾಜು, ಗಮಕಿ ವಿಶ್ವಣ್ಣ, ದಿವಾಕರ್, ಪಿ ವಿಜಯ್, ಹೊಟೆಲ್ ಗಿರಿ, ಮಲ್ಲೂರು ರಾಜು, ಗಿರೀಶ್ ನಾಡಿಗ್, ಮಹಿಳಾ ಸದಸ್ಯರಾದ ಶಿಲ್ಪಾರಾಜುಗೌಡ , ಶಶಿ ದಿವಾಕರ್, ಸುಮಾ ರವಿ, ಕೋಮಲ ನಾಡಿಗ್ ಇನ್ನಿತರರಿದ್ದರು.

error: Content is protected !!