ಫಾರ್ಮಾಸಿಸ್ಟ್ ಹುದ್ದೆಗಳಿಗೆ ನೇಮಕ ಮಾಡಲು ಒತ್ತಾಯ

ಫಾರ್ಮಾಸಿಸ್ಟ್ ಹುದ್ದೆಗಳಿಗೆ ನೇಮಕ ಮಾಡಲು ಒತ್ತಾಯ

ಎಸ್.ಎಂ. ರವಿಕುಮಾರ್ ಸರ್ಕಾರಕ್ಕೆ ಮನವಿ

ದಾವಣಗೆರೆ, ಮೇ 26- ಖಾಲಿ ಇರುವ ಫಾರ್ಮಾಸಿಸ್ಟ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿ, ಹಾಲಿ ಇರುವ ಫಾರ್ಮಾಸಿಸ್ಟ್‌ಗಳ ಮೇಲಿ ರುವ ಒತ್ತಡ ನಿವಾರಣೆ ಮಾಡಲು ಸಹಕರಿಸುವಂತೆ ಕರ್ನಾಟಕ ರಾಜ್ಯ ಫಾರ್ಮಸಿ ಅಧಿಕಾರಿಗಳ  ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ರವಿಕುಮಾರ್ ಸರ್ಕಾರಕ್ಕೆ ಮನವಿ ಮಾಡಿದರು.

ನಗರದ ಸರ್ಕಾರಿ ನೌಕರರ ಸಮುದಾಯ ಭವನದ ಆವರಣದ ಲ್ಲಿರುವ ಮೇರಿ ದೇವದಾಸಿಯ ಮಿನಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಫಾರ್ಮಸಿ ಅಧಿಕಾರಿಗಳ ಸಂಘದ ವತಿಯಿಂದ ಇಂದು ಹಮ್ಮಿಕೊಂಡಿದ್ದ ನಿವೃತ್ತ ಫಾರ್ಮಸಿ ಅಧಿಕಾರಿಗಳಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ದಾವಣಗೆರೆ ಜಿಲ್ಲೆಯ ಫಾರ್ಮಾ ಸಿಸ್ಟ್ ನೇಮಕಾತಿಯಲ್ಲಿ ಆದ್ಯತೆ ನೀಡ ಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲು ಕೋರಿದರು.

ಜಿಲ್ಲಾ ಔಷಧ ಉಗ್ರಾಣ ಘಟಕದ ವಾಹನ ನವೀಕರಣ ಅವಧಿ ಮುಗಿದಿದ್ದು, ಪರ್ಯಾಯವಾಗಿ ವಾಹನ ಮಂಜೂರು ಮಾಡುವ ಮೂಲಕ ಅನುಕೂಲ ಮಾಡಿ ಕೊಡುವಂತೆ ಮತ್ತು ಸ್ಟೋರೇಜ್ ಸೌಲಭ್ಯದ ಕೊರತೆ ಕಂಡುಬಂದಿದ್ದು, ಅದನ್ನು ಕೂಡಲೇ ನೀಗಿಸಿ ಔಷಧಿ ಗುಣಮಟ್ಟ ಕಾಪಾಡಲು ಅವಕಾಶ ಮಾಡಿಕೊಡಬೇಕೆಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಎಂ.ಎನ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಪದಾಧಿಕಾರಿಗಳಾದ ಹಾವೇರಿಯ ಪಾಟೀಲ್, ಚಿತ್ರ ದುರ್ಗದ ನಟರಾಜ್, ವರಶಂಕರ ಅಮಶೆಟ್ಟಿ, ಶ್ರೀಶೈಲಮೂರ್ತಿ, ಸುರೇಶ್, ಎಂ.ಕೆ. ಪ್ರಭುದೇವ್, ಶ್ರೀಮತಿ ಸುಜಾತ, ಮುಜೀಬ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!