ಜೆಇಇ ಮೇನ್ಸ್ ಪರೀಕ್ಷೆ : ರಾಜ್ಯಕ್ಕೆ ಪ್ರಥಮ, ರಾಷ್ಟ್ರಕ್ಕೆ 16ನೇ ಸ್ಥಾನ ಪಡೆದ ವಿಶ್ವಾಸ್

ಜೆಇಇ ಮೇನ್ಸ್ ಪರೀಕ್ಷೆ : ರಾಜ್ಯಕ್ಕೆ ಪ್ರಥಮ, ರಾಷ್ಟ್ರಕ್ಕೆ 16ನೇ ಸ್ಥಾನ ಪಡೆದ ವಿಶ್ವಾಸ್

ಹೊನ್ನಾಳಿ, ಮೇ 23- ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 16ನೇ ಸ್ಥಾನ ಮತ್ತು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಆರ್.ಆರ್.ವಿಶ್ವಾಸ್ ಅವರ ಸಾಧನೆಗೆ ಶಾಸಕ ಡಿ.ಜಿ. ಶಾಂತನಗೌಡ ಶ್ಲ್ಯಾಘಿಸಿದರು.

ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಸಾಯಿ ಗುರುಕುಲ ವಸತಿಯುತ ಶಾಲಾ-ಕಾಲೇಜುಗಳ ಸಂಯುಕ್ತಾ ಶ್ರಯದಲ್ಲಿ  ನಡೆದ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ ಅಭಿ ನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸ್ಥೆಯ ಮತ್ತೊಬ್ಬ ವಿದ್ಯಾರ್ಥಿ ಪಿ.ಎಚ್. ಕುಬೇರ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 456ನೇ ರಾಂಕ್ ಗಳಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಗ್ರಾಮದ ಆರ್.ಆರ್. ವಿಶ್ವಾಸ್ ಮತ್ತು ಶಿವಮೊಗ್ಗ ತಾಲ್ಲೂಕಿನ ಹೊಳೆಹನಸವಾಡಿ ಗ್ರಾಮದ ಪಿ.ಎಚ್. ಕುಬೇರ ಮಾತನಾಡಿ, ಸಂಸ್ಥೆಯ ಉಪನ್ಯಾಸಕರು ನಮ್ಮ ಆರೋಗ್ಯದ ಕಡೆಗೂ ಗಮನಹರಿಸುವ ಜತೆಗೆ, ಅತ್ಯುತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡಿದ್ದಕ್ಕೆ ಜೆಇಇ ಪರೀಕ್ಷೆ ಯಲ್ಲಿ ಸಾಧನೆ ಮಾಡಲು ಸಾಧ್ಯವಾಯಿತೆಂದು ವಿವರಿಸಿದರು.

ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಪ್ರದೀಪ್‌ಗೌಡ, ಆಡಳಿತಾಧಿಕಾರಿ ಡಿ.ಎಸ್. ಅರುಣ್, ಖಜಾಂಚಿ ಡಿ.ಜಿ.ಸೋಮಪ್ಪ, ನಿರ್ದೇಶಕ ಡಿ.ಎಸ್. ಪ್ರದೀಪ್‌ಗೌಡ, ಪ್ರಾಚಾರ್ಯ ಎಚ್.ಎಂ. ದರ್ಶನ್, ಶಿಕ್ಷಣ ಸಂಯೋಜಕ ಎ.ಜಿ.ಹರೀಶ್ ಕುಮಾರ್, ಉಪನ್ಯಾಸಕರಾದ ಕೆ.ಎನ್. ಉಷಾ, ಸುದರ್ಶನ್, ರೂಪಾ, ಮಹೇಶ್, ಜಿ. ಕೃಷ್ಣಮೂರ್ತಿ, ದಿವ್ಯಾ ಮತ್ತಿತರರಿದ್ದರು.

error: Content is protected !!