ತಿಂಗಳ-ತಿರುಳು ಕಾರ್ಯಕ್ರಮ ಯಶಸ್ವಿ

ತಿಂಗಳ-ತಿರುಳು ಕಾರ್ಯಕ್ರಮ ಯಶಸ್ವಿ

ದಾವಣಗೆರೆ, ಮೇ 19- ನಗರದ ಧ.ರಾ.ಮ. ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ `ತಿಂಗಳ – ತಿರುಳು’ ಕಾರ್ಯಕ್ರಮ ನಡೆಯಿತು.

ಪ್ರಾಚಾರ್ಯೆ ಎಂ.ಪಿ.ರೂಪಶ್ರೀ ಕಾರ್ಯಕ್ರಮ ಉದ್ಘಾಟಿಸಿ ನಮ್ಮ ಜೀವನಕ್ಕೆ ವಚನಗಳು ಅತ್ಯವಶ್ಯಕ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಸವಣ್ಣನವರ ವಚನಗಳ ವಾಚನ ಸ್ಪರ್ಧೆ ನಡೆಯಿತು. ಕನ್ನಡ ವಿಭಾಗದ ಮುಖ್ಯಸ್ಥ ಶಿವಪ್ಪ ಮುಳ್ಳೂರ್  ಪ್ರಾಸ್ತಾವಿಕ ಮಾತನಾಡಿದರು. ಡಾ.ಎಚ್‌.ಬಿ.ವಿ ಸೌಮ್ಯ, ಹಾಗೂ ಡಾ.ಪಿ.ಎಸ್‌ ಪ್ರಶಾಂತ್‌ ಕುಮಾರ್ ಸ್ಪರ್ಧೆಯ ನಿರ್ಣಾಯಕರಾಗಿದ್ದರು.

ಐಕ್ಯೂಎಸಿ ಸಂಯೋಜಕ ಡಾ.ಎಲ್‌.ಎಸ್‌. ರೋಹಿತ್, ಡಾ.ಟಿ. ವಸಂತನಾಯ್ಕ್‌ ಮತ್ತು ಕಾಲೇಜಿನ ಸಿಬ್ಬಂದಿ ಇದ್ದರು.

ವಿದ್ಯಾರ್ಥಿನಿಯರಾದ ಗೌರಿ ಸ್ವಾಗತಿಸಿದರು. ಎಂ.ಎಂ. ಪೂರ್ಣಿಮಾ ವಂದಿಸಿದರು. ಚಂದನಾ ನಿರೂಪಿಸಿದರು.

error: Content is protected !!