ದಾವಣಗೆರೆ, ಮೇ 17 – ನಗರದ ಚಿತ್ರಿಕಿ ಶಿವಕುಮಾರ್ ಅವರು ಮಹಾ ರಾಷ್ಟ್ರದ ಗುಡ್ಡಾಪುರ ದಾನಮ್ಮ ದೇವಿ ದೇವಸ್ಥಾನದಲ್ಲಿ ಅಕ್ಕಮಹಾದೇವಿಯ ಯೋಗಾಂಗ ತ್ರಿವಿಧಿ ವಚನಗಳನ್ನು ಹಾಡಿದರು. ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಕೋಟೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಅಕ್ಕಮಹಾದೇವಿಯವರ `ತನುಕರಗದವರಲ್ಲಿ’ ವಚನ ಹಾಡಿದರು. ಬೀದರ್ನ ಬಸವಗಿರಿಯಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಶಿವಶರಣೆ ಅಕ್ಕ ಅನ್ನಪೂರ್ಣ ತಾಯಿಯವರು ಚಿತ್ರಿಕಿ ಶಿವಕುಮಾರ್ ಮತ್ತು ಪುಷ್ಪ ದಂಪತಿಯನ್ನು ಸನ್ಮಾನಿಸಿ, ಗೌರವಿಸಿದರು.
ಬಸವಗಿರಿಯಲ್ಲಿ ಚಿತ್ರಿಕಿ ಶಿವಕುಮಾರ್ ದಂಪತಿಗೆ ಸನ್ಮಾನ
![05 basvagiri 18.05.2024 ಬಸವಗಿರಿಯಲ್ಲಿ ಚಿತ್ರಿಕಿ ಶಿವಕುಮಾರ್ ದಂಪತಿಗೆ ಸನ್ಮಾನ](https://janathavani.com/wp-content/uploads/2024/05/05-basvagiri-18.05.2024-860x418.jpg)