ರೆಡ್ ಕ್ರಾಸ್‌ನಿಂದ ಆರೋಗ್ಯ ತಪಾಸಣೆ

ರೆಡ್ ಕ್ರಾಸ್‌ನಿಂದ ಆರೋಗ್ಯ ತಪಾಸಣೆ

ದಾವಣಗೆರೆ, ಮೇ 6 – ಕಾರ್ಮಿಕರ ದಿನಾಚರಣೆ ಪ್ರಯುಕ್ತ ಭಾರತೀಯ ರೆಡ್ ಕ್ರಾಸ್, ಅಲ್ಟ್ರಾಟೆಕ್ ಸಿಮೆಂಟ್, ವಾಸನ್ ಕಣ್ಣಿನ ಆಸ್ಪತ್ರೆ, ರಿಧಿ ದಂತ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಅಂದು ನಗರದ ಅಲ್ಟ್ರಾಟೆಕ್ ಸಿಮೆಂಟ್ ಕಚೇರಿಯಲ್ಲಿ  ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಕಿವಿ, ಮೂಗು, ಗಂಟಲು, ಕಣ್ಣು ಹಾಗೂ ದಂತ ತಪಾಸಣೆ ಜತೆಗೆ ರಕ್ತದಾನ ಶಿಬಿರ ಯಶಸ್ವಿಯಾಗಿ ಜರುಗಿತು.

ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ.ಎ.ಎಮ್ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್ ಜ್ಯೋತಿ, ನಿರ್ದೇಶಕ ಡಿ.ಎನ್‌. ಶಿವಾನಂದ್, ವೈದ್ಯಾಧಿಕಾರಿ ಡಾ.ಪಿ.ಕೆ ಬಸವರಾಜ್, ವೈದ್ಯರಾದ ಡಾ. ಯಶವಂತ್, ಡಾ.ಎ.ಎಂ ಶಿವಕುಮಾರ್, ಡಾ.ಎಚ್‌.ಕೆ. ಪುನೀತ್, ಡಾ.ಎಸ್‌.ಬಿ. ಭಾವನಾ, ಎಚ್‌.ಎಸ್‌. ನಾಗರಾಜ್, ನೂರ್ ಸಾಬ್, ಕಾವ್ಯಶ್ರೀ, ಎನ್‌.ಜಿ. ಶಿವಕುಮಾರ್‌, ಆರ್‌. ವಿನಾಯಕ, ಕೊಟ್ರೇಶ್, ಅಲ್ಟ್ರಾಟೆಕ್ ಸಿಮೆಂಟ್‌ನ ಟೆಕ್ನಿಕಲ್ ವಿಭಾಗದ ವ್ಯವಸ್ಥಾಪಕ ಗಣಪತಿ ಮುಂಬಾರೆ, ಎಂ.ಸಿ ಪ್ರೇಮ್ ಕುಮಾರ್,  ರವಿಕುಮಾರ್, ಮಹಮ್ಮದ್ ಅಜರ್ ಮತ್ತು ಇತರರು ಇದ್ದರು.

error: Content is protected !!