ಚೆಸ್ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆ

ಚೆಸ್ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆ

ದಾವಣಗೆರೆ, ಮೇ 16- ನ್ಯೂ ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಡಿಸ್ಟ್ರಿಕ್ಟ್ ಚೆಸ್ ಚಾಂಪಿಯನ್‌ಶಿಪ್‌ ಪಂದ್ಯಾವಳಿಯನ್ನು ನಗರದ ರೋಟರಿ ಬಾಲ ಭವನದಲ್ಲಿ ಏರ್ಪಡಿಸಲಾಗಿತ್ತು. 

ಈ ಪಂದ್ಯಾವಳಿಯಲ್ಲಿ ಒಟ್ಟು ಏಳು ವಿಭಾಗಗಳಲ್ಲಿ ಪಂದ್ಯಾವಳಿ ನಡೆಸಿ ಪ್ರತಿ ವಿಭಾಗದಲ್ಲಿ ಇಬ್ಬರು ಬಾಲಕರು, ಬಾಲಕಿಯರನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಯಿತು.

7 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಎಂ.ಎಂ. ಜನನಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ರುಥ್ವಿ ಸಿರಿ ಹಾಗೂ 9 ವರ್ಷದ ಬಾಲಕಿಯರ ವಿಭಾಗದಲ್ಲಿ ಸಾನ್ವಿಕ ಹಾಗೂ ಪೂರ್ವಿಕ, ಬಾಲಕರ ವಿಭಾಗದಲ್ಲಿ ಜಿ.ಎಸ್. ಆಕಾಶ್, ಮೊಹಮ್ಮದ್ ಆರ್ಯನ್, 11 ವರ್ಷದ ಬಾಲಕರ ವಿಭಾಗದಲ್ಲಿ ಅಮಿತ್, ಚಂದ್ರ, ಎಂ.ಎಸ್. ಅದ್ವೈತ್, ಬಾಲಕಿಯರ ವಿಭಾಗದಲ್ಲಿ ಹರಿಹರದ ಎಸ್.ಎಂ. ಶ್ರಾವ್ಯ 13 ವರ್ಷದ ಬಾಲಕಿಯರ ವಿಭಾಗದಲ್ಲಿ ಸೌಜನ್ಯಯುವರಾಜ್, ಬಾಲಕರ ವಿಭಾಗದಲ್ಲಿ ಇಶಾನ್ ಬಂಗೇರ, ಹೇಮಾದ್ರಿ ಮೂರ್ತಿ 15 ವರ್ಷದ ಬಾಲಕರ ವಿಭಾಗದಲ್ಲಿ ಎಂ.ಎಸ್. ದಿಗಂತ್, ಜಿ.ಎಸ್. ನಿಶ್ಚಲ್ 17 ವರ್ಷದ ಬಾಲಕರ ವಿಭಾಗದಲ್ಲಿ ಹರಿಹರದ ಎಂ.ಎಸ್. ಸ್ವಯಂ, ಬಿ. ಯುವರಾಜ್ ಬಾಲಕಿಯರ ವಿಭಾಗದಲ್ಲಿ ದಾವಣಗೆರೆಯ ಸಿ.ಎನ್. ವೇದಶ್ರೀ 19 ವರ್ಷದ ಬಾಲಕರ ವಿಭಾಗದಲ್ಲಿ ಎ. ಅರ್ಫತ್, ವೈ.ಎಂ. ತರುಣ್ ಆಯ್ಕೆಯಾದರು.

ಆಯ್ಕೆಯಾದ ಮಕ್ಕಳಿಗೆ ನಗರದ ವಕೀಲ ಎ.ಎಂ. ಹೆಗಡೆ ಹಾಗೂ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಪ್ರಶಸ್ತಿ ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀಪಾದ್ ಹೆಗಡೆ, ಎಸ್.ಎಂ. ವಿದ್ಯಾ, ಪ್ರತೀಕ್ ಹೆಗಡೆ, ಯುವರಾಜ್ ಇನ್ನು ಮುಂತಾದವರು ಇದ್ದರು.

error: Content is protected !!