ಹೊನ್ನಾಳಿ : ವಿಜೃಂಭಣೆಯ ಬನ್ನಿ ಮಹಾಂಕಾಳಿ ರಥೋತ್ಸವ

ಹೊನ್ನಾಳಿ : ವಿಜೃಂಭಣೆಯ ಬನ್ನಿ ಮಹಾಂಕಾಳಿ ರಥೋತ್ಸವ

ಹೊನ್ನಾಳಿ, ಮೇ 15- ಪಟ್ಟಣದ ಬನ್ನಿಮಹಾಂಕಾಳಿ ದೇವತೆಯ 8ನೇ ವರ್ಷದ ರಥೋತ್ಸವ ದೇವಸ್ಥಾನ ಪಕ್ಕ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು.

ಬನ್ನಿಮಹಾಂಕಾಳಿ ರಥಕ್ಕೆ ವಿವಿಧ ಹೂಗಳಿಂದ ಅಲಂಕರಿಸಿ, ರಥದ ಗಾಲಿಗಳಿಗೆ ಹೆಣ್ಣೆಯನ್ನು ಹಾಕಿ ರಥವನ್ನು ಶೃಂಗರಿಸಲಾಗಿತ್ತು. 

ರಥಕ್ಕೆ ವಿವಿಧ ಬಣ್ಣದ ಬಾವುಟಗಳು ಮತ್ತು ಹೂವುಗಳು ಮತ್ತು ಬಾಳೆ ಕಂಬಗಳನ್ನು ಕಟ್ಟಲಾಗಿತ್ತು. 

ಅಲಂಕಾರಗೊಂಡಿದ್ದ ರಥದಲ್ಲಿ ಬನ್ನಿಮಹಾಂಕಾಳಿ ದೇವತೆನ್ನುಟ್ಟು ಬುಧವಾರ ಮಧ್ಯಾಹ್ನ ರಥಕ್ಕೆ ಶಾಂತಿ ಪೂಜೆ ನಡೆಸಿ, ಅರ್ಚಕರಿಂದ ರಥಕ್ಕೆ ಪೂಜೆ ಮಾಡಿದ ನಂತರ ರಥವನ್ನು ಭಕ್ತ ಸಮೂಹ ಎಳೆದ ತಮ್ಮ ಭಕ್ತಿ ಸರ್ಮರ್ಪಿಸಿದರು. 

ಕೆಲ ಭಕ್ತರು ರಥದ ಮೇಲೆ ಬಾಳೆಹಣ್ಣು, ಕಾಳುಮೆಣಸು, ಮಂಡಕ್ಕಿ ಮತ್ತಿತರ ವಸ್ತುಗಳನ್ನು ತೂರುತ್ತಾ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು. ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆದು, ಬಾಳೆಹಣ್ಣು ನೈವೇದ್ಯ ಮಾಡಿ ಕೃತಾರ್ಥರಾದರು.

ಬುಧವಾರ ಮಧ್ಯಾಹ್ನ ರಥೋತ್ಸವ ನಡೆಯು ಸಂದರ್ಭದಲ್ಲಿ ಅರಕೆರೆ ಗ್ರಾಮದ ವೀರಾಗಾಸೆ ತಂಡದವರಿಂದ ಪುರವಂತಿಕೆ ನಡೆಸಿದರು. 

ದೊಡ್ಡಪೇಟೆ ಕುಂಕುದ್‍ಜ್ಯೋತಿ ಪ್ರಕಾಶ್ ವಿವಿಧ ದಾನಿಗಳಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಮಿತಿ ಗೌರವಧ್ಯಕ್ಷ ಕೊಟ್ರೇಶಪ್ಪ, ರವಿಕುಮಾರ್, ಅಧ್ಯಕ್ಷ ಶಾಂತರಾಜ್, ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಚಂದ್ರಚಾರ್, ಪ್ರಕಾಶ್, ಖಜಾಂಚಿ ಪ್ರಭಕಾರ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!