ಜಿಲ್ಲಾ ಟಾಪರ್‌ ಗಾನವಿಗೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರಿಂದ ಗೌರವ

ಜಿಲ್ಲಾ ಟಾಪರ್‌ ಗಾನವಿಗೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರಿಂದ ಗೌರವ

ದಾವಣಗೆರೆ, ಮೇ 12 – ಎಸ್.ಎಸ್.ಎಲ್‌.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಕು. ಹೆಚ್.ಜಿ. ಗಾನವಿ ಅವರನ್ನು ಅಭಿನಂದಿಸಿರುವ ಬಾಪೂಜಿ ಆಡಳಿತ ಮಂಡಳಿ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಜೆ.ಹೆಚ್. ಪಟೇಲ್‌ ಬಡಾವಣೆಯಲ್ಲಿರುವ ಗಾನವಿ ಅವರ ನಿವಾಸಕ್ಕೆ ಭೇಟಿ ನೀಡಿ, ಸನ್ಮಾನಿಸಿದರಲ್ಲದೇ, ನೆನಪಿನ ಕಾಣಿಕೆ ನೀಡಿ, ಮುಂದಿನ ದಿನಗಳಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಶಿವ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಚಂದ್ರ ಶೇಖರ್ ಐಗೂರು, ನಿಕಟಪೂರ್ವ ಕಸಾಪ ಜಿಲ್ಲಾಧ್ಯಕ್ಷ  ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ಗಾನವಿ ಅವರ ತಂದೆ ಗಿರೀಶ್, ತಾಯಿ ಡಿ.ಎಸ್. ಜ್ಯೋತಿ, ಅಜ್ಜಿ ಹಾಗೂ ಕುಟುಂಬದ ಸದಸ್ಯರು ಇತರರು ಉಪಸ್ಥಿತರಿದ್ದರು.

error: Content is protected !!