ದಾವಣಗೆರೆ, ಮೇ 9- ಇಲ್ಲಿನ ಎಂಇಎಸ್ ಪ್ರೌಢಶಾಲೆಯ 1994-95ನೇ ಸಾಲಿನ ವಿದ್ಯಾರ್ಥಿಗಳಿಂದ ಇತ್ತೀಚೆಗೆ ಶಾಮನೂರಿನ ಬಸವರಾಜ್ ರೆಸಾರ್ಟ್ ತೋಟದ ಮನೆಯಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು.
ಈ ವೇಳೆ ಡಾ.ಕೆ. ಬಸವರಾಜಪ್ಪ ಹಳೇ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಗುರುಗಳ ಬಗ್ಗೆ ನಿಮ್ಮಲ್ಲಿರುವ ಅಪಾರ ಗೌರವ, ವಿನಯತೆ, ಭಯ-ಭಕ್ತಿಯನ್ನು ಕಂಡು ನನಗೆ ಸಂತೋಷವಾಯಿತು ಎಂದರು.
ಶಿಕ್ಷಕರಾದ ಟಿ.ಎಸ್. ನವೀನ್ಕುಮಾರ್, ಸವಿತಾ ಮತ್ತು ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ್, ವಿನುತಾ, ಬಸವರಾಜ್, ಧನ್ಯಕುಮಾರ್, ಮಂಜುಳಾ, ಸಾವಿತ್ರ, ಅನಿತಾ, ಆದರ್ಶ್, ಪ್ರವೀಣ್, ಹನುಮಂತಪ್ಪ, ಕರಿಬಸಪ್ಪ, ವಿಜಯ್ಕುಮಾರ್, ಗೋಪಿಚಂದ್, ಕಿರಣ್, ಕರಿಬಸಪ್ಪ, ರವಿಕಾಂತ, ಸುರೇಶ್, ರಾಜು ಇದ್ದರು.