ಹಳೇ ವಿದ್ಯಾರ್ಥಿಗಳಿಂದ ಗುರು ವಂದನೆ

ಹಳೇ ವಿದ್ಯಾರ್ಥಿಗಳಿಂದ ಗುರು ವಂದನೆ

ದಾವಣಗೆರೆ, ಮೇ 9- ಇಲ್ಲಿನ ಎಂಇಎಸ್ ಪ್ರೌಢಶಾಲೆಯ 1994-95ನೇ ಸಾಲಿನ ವಿದ್ಯಾರ್ಥಿಗಳಿಂದ ಇತ್ತೀಚೆಗೆ ಶಾಮನೂರಿನ ಬಸವರಾಜ್‌ ರೆಸಾರ್ಟ್ ತೋಟದ ಮನೆಯಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು.

ಈ ವೇಳೆ ಡಾ.ಕೆ. ಬಸವರಾಜಪ್ಪ ಹಳೇ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಗುರುಗಳ ಬಗ್ಗೆ ನಿಮ್ಮಲ್ಲಿರುವ ಅಪಾರ ಗೌರವ, ವಿನಯತೆ, ಭಯ-ಭಕ್ತಿಯನ್ನು ಕಂಡು ನನಗೆ ಸಂತೋಷವಾಯಿತು ಎಂದರು.

ಶಿಕ್ಷಕರಾದ ಟಿ.ಎಸ್. ನವೀನ್‌ಕುಮಾರ್, ಸವಿತಾ ಮತ್ತು ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ್, ವಿನುತಾ, ಬಸವರಾಜ್, ಧನ್ಯಕುಮಾರ್, ಮಂಜುಳಾ, ಸಾವಿತ್ರ, ಅನಿತಾ, ಆದರ್ಶ್, ಪ್ರವೀಣ್, ಹನುಮಂತಪ್ಪ, ಕರಿಬಸಪ್ಪ, ವಿಜಯ್‌ಕುಮಾರ್, ಗೋಪಿಚಂದ್, ಕಿರಣ್, ಕರಿಬಸಪ್ಪ, ರವಿಕಾಂತ, ಸುರೇಶ್, ರಾಜು ಇದ್ದರು.

error: Content is protected !!