ಸಿ. ಕೇಶವಮೂರ್ತಿ ಸೇವೆ ಮರೆಯುವಂತಿಲ್ಲ ಆರ್ಯವೈಶ್ಯ ಸಮಾಜದ ಸಭೆಯಲ್ಲಿ ಸಚಿವ ಎಸ್ಸೆಸ್ಸೆಂ

ಸಿ. ಕೇಶವಮೂರ್ತಿ ಸೇವೆ ಮರೆಯುವಂತಿಲ್ಲ ಆರ್ಯವೈಶ್ಯ ಸಮಾಜದ ಸಭೆಯಲ್ಲಿ ಸಚಿವ ಎಸ್ಸೆಸ್ಸೆಂ

ದಾವಣಗೆರೆ, ಮೇ 2-   ಬಡವರ, ನಿರ್ಗತಿಕರ ಹಾಗೂ ದೀನ ದಲಿತರ ಏಳಿಗೆಗಾಗಿ ಆಶಾಕಿರಣವಾಗಿ ಸಮಾಜಸೇವೆ ಮಾಡಿರುವಂತಹ ದಿ. ಸಿ. ಕೇಶವಮೂರ್ತಿ ಅವರ ಸೇವೆ ಅಪಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್‌ ಅವರು ತಿಳಿಸಿದರು.

ನಗರದ ಸದ್ಯೋಜಾತ ಮಠದಲ್ಲಿ ಆರ್ಯವೈಶ್ಯ ಸಮಾಜದಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮಾಜಿ ಸಚಿವೆ ದಿ. ಶ್ರೀಮತಿ ನಾಗಮ್ಮ ಕೇಶವಮೂರ್ತಿ ಹಾಗೂ ಸಿ.ಕೇಶವಮೂರ್ತಿ ಅವರು ದಾವಣಗೆರೆ ಜಿಲ್ಲೆಗೆ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ ಎಂದ ಸಚಿವರು ಜಿಲ್ಲೆಯಲ್ಲಿ ಉತ್ತಮ ಪ್ರಾಜೆಕ್ಟ್ ತಂದು ಮತ್ತಷ್ಟು ಅಭಿವೃದ್ಧಿ ಮಾಡುವ ಕನಸು ಕಂಡಿದ್ದೇವೆ. ಕಾಂಗ್ರೆಸ್ ಪಕ್ಷದ ಜತೆ ಆರ್ಯವೈಶ್ಯ ಸಮಾಜ ಬಾಂಧವರು ಒಗ್ಗಟ್ಟಿನಿಂದ ಕೈ ಹಿಡಿಯಬೇಕು.

ನನಗಿಂತ ಹೆಚ್ಚಿನ ರೀತಿಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರು ನಿಮ್ಮ ಒಡನಾಡಿಯಾಗಿದ್ದಾರೆ. ದಾವಣಗೆರೆ ಜಿಲ್ಲೆಗೆ ತ್ರಿಬಲ್ ಇಂಜಿನ ಸರ್ಕಾರದ ರೀತಿಯಲ್ಲಿ ನಾವು ಕೆಲಸ ಮಾಡುತ್ತೇವೆ. 

ಅಭ್ಯರ್ಥಿಯಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ ಅವರನ್ನು ಮನೆ ಮಗಳಂತೆ ಆಶೀರ್ವದಿಸಿ ಲೋಕಸಭೆಗೆ ಕಳುಹಿಸಿ ಕೊಡಬೇಕು ಎಂದು ಮತಯಾಚನೆ ಮಾಡಿದರು.

ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸಮರ್ಥ ಮಲ್ಲಿಕಾರ್ಜುನ, ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷರಾದ ಆರ್.ಎಲ್. ಪ್ರಭಾಕರ, ಆರ್ಯವೈಶ್ಯ ಮುಖಂಡರುಗಳಾದ
ಆರ್.ಜಿ ಶ್ರೀನಿವಾಸ ಮೂರ್ತಿ, ಕಾಸಲ್ ಎಸ್. ಸತೀಶ್, ಬಿ.ಟಿ ಅಶ್ವಥ್ ರಾಜ್, ಮಾಕಂ ನಾಗರಾಜ ಗುಪ್ತ, ಅನಂತರಾಮಶೆಟ್ಟಿ, ಎ.ವೈ.ಸತ್ಯನಾರಾಯಣ, ಕಾಸಲ್ ಮಂಜುನಾಥ್, ಬಿ.ಟಿ.ಸುಪುತ್ರ, ವೈ.ಬಿ.ಸತೀಶ್, ಎಸ್.ಸುನಿಲ್, ಬಿ.ಎಸ್.ಶಿವಾನಂದ, ಬಿ.ಎಸ್.ರಾಘವೇಂದ್ರ ಶೆಟ್ಟಿ, ಶ್ರೀಮತಿ ಉಮಾ, ಶ್ರೀಮತಿ ರಾಧಾ ಗೋಪಾಲಕೃಷ್ಣ, ಇತರರಿದ್ದರು.

error: Content is protected !!