ಗಾಂಧಾರಿ ವಿದ್ಯೆ ತರಬೇತಿ ಸಮಾರೋಪ

ಗಾಂಧಾರಿ ವಿದ್ಯೆ ತರಬೇತಿ ಸಮಾರೋಪ

ದಾವಣಗೆರೆ, ಏ. 29- ನಗರದ ಸೋಮೇಶ್ವರ ವಿದ್ಯಾಲಯದಲ್ಲಿ  ವಿದ್ಯಾರ್ಥಿಗಳಿಗೆ ನಡೆದ ಗಾಂಧಾರಿ ವಿದ್ಯೆ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಶಿಬಿರದ ಮಕ್ಕಳಿಂದ ತಮ್ಮ ತಂದೆ – ತಾಯಂದಿರಿಗೆ ಪಾದಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ವೀರೇಶ್ ಹಿರೇಮಠ ಉಪಸ್ಥಿತರಿದ್ದರು. 

ಬೆಂಗಳೂರಿನ ಜ್ಞಾನ ಸಮೃದ್ಧಿ ವಿದ್ಯಾ ಕೇಂದ್ರದ ತರಬೇತುದಾರ ಜೆಂಬಿಗಿ ಕೊಟ್ರೇಶ್ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿ, ನಿರಂತರ ಕಲಿಕೆ ಯಶಸ್ಸಿಗೆ ದಾರಿದೀಪ ಎಂದು ತಿಳಿಸಿದರು.

error: Content is protected !!