ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಹರಿಹರ ಅಮರಾವತಿ ಮಲ್ಲೇಶಪ್ಪ ಪುತ್ರರು

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ   ಹರಿಹರ ಅಮರಾವತಿ ಮಲ್ಲೇಶಪ್ಪ ಪುತ್ರರು

ಹರಿಹರ,ಏ.11- ನಗರದ ಅಮರಾವತಿ ಮಲ್ಲೇಶಪ್ಪನವರ ಮಕ್ಕಳಾದ ಎಬಿಎಂ ವಿಜಯ್ ಕುಮಾರ್ ಮತ್ತು ನಗರಸಭೆ ಬಿಜೆಪಿ ಸದಸ್ಯ ಎಬಿಎಂ ವಿಶ್ವನಾಥ್ ಅವರುಗಳು ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ಮಾಜಿ ಶಾಸಕ ಎಸ್.ರಾಮಪ್ಪ, ಮುಖಂಡ ನಂದಿಗಾವಿ ಶ್ರೀನಿವಾಸ್ ಅವರ ಸಮ್ಮುಖದಲ್ಲಿ   ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 

ಈ ಸಂದರ್ಭದಲ್ಲಿ ಮುಖಂಡರುಗಳಾದ ಎಸ್.ಬಸಪ್ಪ, ಕೃಷ್ಣ ಸಾ ಭೂತೆ, ವಕೀಲ ಎಂ. ನಾಗೇಂದ್ರಪ್ಪ, ರೇವಣಸಿದ್ದಪ್ಪ, ಶಂಕರ ಖಟಾವ ಕರ್, ಸೈಯದ್ ಸನಾವುಲ್ಲಾ, ಹಾಲೇಶ್ ಗೌಡ, ಕೆ.ಕೆ.ರಫೀಕ್,  ಅಲೀಂಬಾಷಾ, ಜಾಕೀರ್ ಸಾಬ್, ನಜೀರ್ ಹುಸೇನ್, ಎನ್.ಹುಲಿಗೇಶ್ ಮತ್ತಿತರರು ಉಪಸ್ಥಿತರಿದ್ದರು.

ಹರಿಹರ ಶಾಸಕರಾದ ಬಿ.ಪಿ ಹರೀಶ್  ಆಪ್ತರು, ಆರ್.ಎಸ್.ಎಸ್.ಕಟ್ಟಾಳು, ಹಿಂದೂಪರ ಹೋರಾಟಗಾರ  ಎಬಿಎಂ ವಿಜಯ್ ಕುಮಾರ್ ಮತ್ತು ನಗರಸಭೆ ಸದಸ್ಯ ಎಬಿಎಂ ವಿಶ್ವನಾಥ್ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಹರಿಹರ ಕಾಂಗ್ರೆಸ್‍ನಲ್ಲಿ ಹೊಸ ಹುರುಪು ಬಂದಂತಾಗಿದೆ ಎಂದು  ಪಕ್ಷದ ಪ್ರಕಟಣೆ ತಿಳಿಸಿದೆ.

error: Content is protected !!