ಹರಿಹರ, ಮಾ.28- ನಗರದ ತುಂಗಭದ್ರಾ ನದಿ ಸೇತುವೆ ಪಕ್ಕದ ರಾಘವೇಂದ್ರ ಸ್ವಾಮಿ ಮಠದ ಹತ್ತಿರ ಇರುವ ಚೆಕ್ ಪೋಸ್ಟ್ನಲ್ಲಿ ನಿನ್ನೆ ಎರಡು ಬೈಕ್ಗಳಲ್ಲಿ ಸಾಗಿಸುತ್ತಿದ್ದ 2 ಲಕ್ಷದ 81 ಸಾವಿರದ 500 ರೂಪಾಯಿ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣೆ ಅಧಿಕಾರಿ ಭಾವನಾ ಬಸವರಾಜ್ ಮತ್ತು ತಹಶೀಲ್ದಾರ್ ಗುರುಬಸವರಾಜ್ ತಿಳಿಸಿದ್ದಾರೆ.
ಬೈಕ್ (ಕೆಎ17 ಎಕ್ಸ್ 9909) ಸವಾರ ಹನುಮಂತಪ್ಪ ಗುಡ್ಡದ್ ಎಂಬ ಕವಲೆತ್ತು ಗ್ರಾಮದ ಯುವಕನಿಂದ 1.84 ಲಕ್ಷ ಮತ್ತು ಸಂತೋಷ ಯು.ಹೆಚ್ (ಕೆಎ 17 ಹೆಚ್ಸಿ 4987) ಹಾಲೂರು ಗ್ರಾಮದ ಯುವಕನಿಂದ 97.5 ಸಾವಿರ ವಶಕ್ಕೆ ಪಡೆದು, ಆ ಹಣವನ್ನು ಖಜಾನೆಯಲ್ಲಿ ಇರಿಸಿದ್ದು, ಜಿಲ್ಲಾ ಚುನಾವಣೆ ಶಾಖೆಯ ಗಮನಕ್ಕೆ ತರಲಾಗಿದ್ದು, ಅವರು ಹಣವನ್ನು ಸಾಗಿಸುತ್ತಿದ್ದವರ ದಾಖಲೆಗಳನ್ನು ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚೆಕ್ ಪೋಸ್ಟ್ ಸಿಬ್ಬಂದಿಗಳಾದ ಜಿ.ಪಿ. ಸಿದ್ದೇಶ್, ಎ ಎಸ್. ಸಣ್ಣಯ್ಯ, ಚಮನ್ ಸಾಬ್, ಚುನಾವಣೆ ಸಿಬ್ಬಂದಿಗಳಾದ ಆಶೋಕ, ಸೋಮಶೇಖರ್, ಉಮೇಶ್ ಇತರರು ಹಾಜರಿದ್ದರು.