`ಮಳೆ-ಬೆಳೆ ಸಮೃದ್ಧಿಯಾಗಲಿ, ಸಕಲ ಜೀವರಾಶಿಗಳಿಗೆ ಒಳಿತಾಗಲಿ’

`ಮಳೆ-ಬೆಳೆ ಸಮೃದ್ಧಿಯಾಗಲಿ, ಸಕಲ ಜೀವರಾಶಿಗಳಿಗೆ ಒಳಿತಾಗಲಿ’

ದುಗ್ಗಮ್ಮ ದೇವಸ್ಥಾನದಲ್ಲಿ ಬಸವರಾಜ ಗುರೂಜಿ ಪ್ರಾರ್ಥನೆ 

ದಾವಣಗೆರೆ, ಮಾ. 28-  ಕಂಚಿಕೆರೆ ಸುಕ್ಷೇತ್ರ ಬಿದ್ದಹನುಮಪ್ಪನಮಟ್ಟಿ ಶ್ರೀ ಬಸವರಾಜ ಗುರೂಜಿ ಅವರು ಶ್ರೀ ದುರ್ಗಾಂ ಬಿಕಾ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವ ಸ್ಥಾನಕ್ಕೆ   ಆಗಮಿಸಿ, ಅಮ್ಮನಿಗೆ ಸೀರೆ, ಕುಪ್ಪಸ, ಅರಿಷಿಣ, ಕುಂಕುಮ, ಉಡಿ ಅಕ್ಕಿ, ಬಳೆ, ತಾಂಬೂಲ, ಫಲಪುಷ್ಪ, ಹಣ್ಣು-ಕಾಯಿಯನ್ನು  ಸಮರ್ಪಿ ಸಿದರು.  ಪೂಜ್ಯರು ಹಿಮಾಲಯದ ಗಂಗಾಜಲದಿಂದ ಪ್ರೋಕ್ಷಿಸಿ ಪೂಜೆ, ಮಹಾಮಂಗಳಾರತಿಯೊಂದಿಗೆ ಮಳೆ-ಬೆಳೆ ಸಮೃದ್ಧಿಯಾಗಲಿ, ಸಕಲ ಜೀವರಾಶಿಗಳಿಗೆ ಒಳಿತಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದರು. ಅಲ್ಲದೇ  ಶ್ರೀ ಈಶ್ವರ ಗಣಪತಿ, ಶ್ರೀ ಮಹಾವಿಷ್ಣು, ಶ್ರೀ ಸೂರ್ಯನಾರಾಯಣ ಹಾಗೂ ಮಕ್ಕಳ ದೇವತೆಗಳಾದ ಶ್ರೀ ಕೆಮ್ಮಿನಮ್ಮ, ಶ್ರೀ ಮೈಲಮ್ಮ, ಶ್ರೀ ಸುಂಕದಮ್ಮ, ಶ್ರೀ ಸಿಡುಬಿನಮ್ಮ, ಶ್ರೀ ದಡಾರಮ್ಮ, ದೇವರುಗಳಿಗೆ ದರ್ಶನ ಮತ್ತು ಪೂಜೆ ಸಲ್ಲಿಸಿದರು.   

error: Content is protected !!