ಹರಪನಹಳ್ಳಿ ಟಿಎಂಎಇಎಸ್ ಶಿಕ್ಷಣ ಕಾಲೇಜ್ ವಿದ್ಯಾರ್ಥಿ ಸಂಘದ ಉದ್ಘಾಟನೆ

ಹರಪನಹಳ್ಳಿ ಟಿಎಂಎಇಎಸ್ ಶಿಕ್ಷಣ ಕಾಲೇಜ್ ವಿದ್ಯಾರ್ಥಿ ಸಂಘದ ಉದ್ಘಾಟನೆ

ಹರಪನಹಳ್ಳಿ, ಮಾ. 28- ಇಲ್ಲಿನ ಟಿಎಂಎ ಇಎಸ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ  2023-24ನೇ ಸಾಲಿನ ವಿದ್ಯಾರ್ಥಿ ಸಂಘದ  ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮವನ್ನು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯ ಆಡಳಿತ ವಿಭಾಗದ ಕುಲ ಸಚಿವ ಎಸ್. ಎನ್ .ರುದ್ರೇಶ್ ಉದ್ಘಾಟಿಸಿ,  ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹಾಗೂ ವ್ಯಕ್ತಿತ್ವ ವಿಕಸನದ ಕುರಿತು ಉಪನ್ಯಾಸ ನೀಡಿದರು.

ಟಿಎಂಎಇ  ಸಂಸ್ಥೆಯ ಕಾರ್ಯದರ್ಶಿ ಡಾ. ಟಿ.ಎಂ.ಚಂದ್ರಶೇಖರಯ್ಯ  ಅಧ್ಯಕ್ಷತೆ ವಹಿಸಿದ್ದರು.  ಜ್ಞಾನಗಂಗೋತ್ರಿ ಆಡಳಿತ ಅಧಿಕಾರಿ ಪ್ರತೀಕ್ ಟಿ.ಎಂ ಉಪಸ್ಥಿತರಿದ್ದರು.   ಪ್ರಾಚಾರ್ಯ ಟಿ.ಎಂ. ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಸಹಾಯಕ ಪ್ರಾಧ್ಯಾಪಕ ಡಾ. ಎನ್.ಟಿ ಮರಳಸಿದ್ದಪ್ಪ ಪ್ರತಿಜ್ಞಾ ವಿಧಿ ಬೋಧಿಸಿದರು.   ಸಹಾಯಕ ಪ್ರಾಧ್ಯಾಪಕ   ಟಿ. ಹೆಚ್  ಗಿರೀಶ್ ವಂದಿಸಿದರು.

ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ  ಮಮತಾ ಹಾಗೂ ನೀಲಮ್ಮ  ನಿರೂಪಿಸಿದರು.

error: Content is protected !!