ಯಲವಟ್ಟಿ : ಪ್ರಣವ ಧ್ವಜಾರೋಹಣ

ಯಲವಟ್ಟಿ : ಪ್ರಣವ ಧ್ವಜಾರೋಹಣ

ಮಲೇಬೆನ್ನೂರು, ಮಾ.28- ಯಲವಟ್ಟಿ ಗ್ರಾಮದ ಶ್ರೀ ಗುರು ಸಿದ್ಧಾಶ್ರಮದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಲೀನ ಸದ್ಗುರುಗಳಾದ ಶ್ರೀ ಶಿವಾನಂದ ಶ್ರೀಗಳ ಮತ್ತು ಶ್ರೀ ನಿತ್ಯಾನಂದ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮದ ಅಂಗವಾಗಿ ಗುರುವಾರ ಬೆಳಿಗ್ಗೆ ಪ್ರಣವ ಧ್ವಜಾರೋಹಣವನ್ನು ಮಲೇಬೆನ್ನೂರಿನ ಶಿವ ಸಹಕಾರ ಸಂಘದ ಅಧ್ಯಕ್ಷ ಡಾ.ಬಿ.ಚಂದ್ರಶೇಖರ್ ನೆರವೇರಿಸಿದರು.

ಶ್ರೀ ಯೋಗಾನಂದ ಸ್ವಾಮೀಜಿ, ದಾವಣಗೆೆರೆಯ ಜಡೆಸಿದ್ಧ ಆಶ್ರಮದ ಶ್ರೀ ಶಿವಾನಂದ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣಕಂಥಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಹದಡಿ ಚಂದ್ರಗಿರಿ ಮಠದ ಶ್ರೀ ಸದ್ಗುರು ಮುರುಳೀಧರ ಸ್ವಾಮೀಜಿ, ಹೋತನಹಳ್ಳಿ ಸಿದ್ಧಾಶ್ರಮದ ಶ್ರೀ ಶಂಕರಾನಂದ ಸ್ವಾಮೀಜಿ, ಹುಣಸೆಕಟ್ಟೆಯ ಶ್ರೀ ಕೃಷ್ಣಾನಂದ ಭಾರತಿ ಸ್ವಾಮೀಜಿ, ಗ್ರಾಮದ ಜಿ.ಮುರುಗೆಪ್ಪಗೌಡ್ರು, ಜಿ.ಬಸಪ್ಪ ಮೇಷ್ಟ್ರು, ಡಿ.ಯೋಮಕೇಶ್ವರಪ್ಪ, ಜಿ.ಆಂಜನೇಯ, ಕೊಮಾರನಹಳ್ಳಿಯ ಜಿ.ಮಂಜುನಾಥ್ ಪಟೇಲ್, ಯಕ್ಕನಹಳ್ಳಿ ಬಸವರಾಜಪ್ಪ, ಜಿಗಳಿ ಆನಂದಪ್ಪ, ಕುಂಬಳೂರು ವಾಸು, ಕೆ.ಎನ್.ಹಳ್ಳಿ ಹುಗ್ಗಿ ರೇವಣಪ್ಪ, ಕೃಷ್ಣಪ್ಪಜ್ಜ, ಸಿರಿಗೆರೆಯ ಸಿದ್ದೇಶ್, ಕುಂಬಳೂರಿನ ಕೆ.ಕುಬೇರಪ್ಪ, ಗೋಪಾಲಪ್ಪ, ಕಾಮರಾಜ್, ಯಲವಟ್ಟಿಯ ಡಿ.ಸಿದ್ದೇಶ್, ಎ.ಶೇಖರಪ್ಪ, ಬಸವನಗೌಡ, ನಿವೃತ್ತ ಯೋಧ ಶಿವಕುಮಾರ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.

error: Content is protected !!