ಕೇರಂ ಪಂದ್ಯಾವಳಿ ಸೈಯ್ಯದ್ ಸಿರಾಜುದ್ದೀನ್‍ಗೆ ದ್ವಿತೀಯ ಸ್ಥಾನ

ಕೇರಂ ಪಂದ್ಯಾವಳಿ ಸೈಯ್ಯದ್ ಸಿರಾಜುದ್ದೀನ್‍ಗೆ ದ್ವಿತೀಯ ಸ್ಥಾನ

ದಾವಣಗೆರೆ, ಮಾ. 24- ಶಿರಸಿ ಗಾಣಿಗ ಸಮುದಾಯ ಭವನದಲ್ಲಿ ಸ್ಫೂರ್ತಿ ಕೇರಂ ಅಸೋಸಿಯೇಷನ್ (ದೇವಿಕೆರೆ) ನಿಂದ ನಡೆದ ರಾಜ್ಯಮಟ್ಟದ ರ‍್ಯಾಂಕಿಂಗ್  ಕೇರಂ ಚಾಂಪಿಯನ್‌ಶಿಪ್‌ನ ಹಿರಿಯ ವಿಭಾಗದಲ್ಲಿ ನಗರದ ಕೇರಂ ಕ್ರೀಡಾಪಟು ಸೈಯ್ಯದ್ ಸಿರಾಜುದ್ದೀನ್ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸೈಯದ್ ಸಿರಾಜುದ್ದೀನ್ ಅವರನ್ನು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕೇರಂ ಸಮಿತಿ ಉಪಾಧ್ಯಕ್ಷ ಕೇರಂ ಗಣೇಶ್, ಗೋಪಾಲ್, ಸತೀಶ್, ಕೆ.ಎಸ್. ವಿಜಯಕುಮಾರ್, ಸೋಮ್ಸ್, ಯುವರಾಜ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!