ಹರಿಹರದಲ್ಲಿ ಪುನೀತ್‌ ಅಭಿಮಾನಿ ಬಳಗದಿಂದ ರಕ್ತದಾನ ಶಿಬಿರ

ಹರಿಹರದಲ್ಲಿ ಪುನೀತ್‌ ಅಭಿಮಾನಿ ಬಳಗದಿಂದ ರಕ್ತದಾನ ಶಿಬಿರ

ಹರಿಹರ, ಮಾ.20- ತಾಲ್ಲೂಕಿನ ಹರಗನಹಳ್ಳಿ ಗ್ರಾಮದಲ್ಲಿ ಪುನೀತ್‌ ರಾಜ್‌ಕುಮಾರ್ ಅಭಿಮಾನಿ ಬಳಗದ ವತಿಯಿಂದ ಭಾನುವಾರ ದಿ. ಪುನೀತ್‌ ರಾಜ್‌ಕುಮಾರ್ ಅವರ ಜನ್ಮ ದಿನದ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬೆಳ್ಳೂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಐಸಿಟಿಸಿ ವಿಭಾಗದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ವೈದ್ಯಾಧಿಕಾರಿ ಡಾ.ಪಿ.ಕೆ. ಬಸವರಾಜ್, ಡಾ.ಬಿ.ಎಂ. ಸಂಜಯ್, ಎನ್.ಜಿ. ಶಿವಕುಮಾರ್, ಆರ್. ವಿನಾಯಕ, ಕೆ. ಜ್ಯೋತಿ ಗುಡ್ಡದ್, ಓ.ಎಸ್. ವಿನಯ್ ಕುಮಾರ್, ಕೊಟ್ರೇಶ್, ಅಶೋಕ್ ಕುಮಾರ್, ಚಂದ್ರು ಗೌಡ, ಸುನೀಲ್, ಸಂತೋಷ್, ಸಂದೀಪ್, ಅಂಗನವಾಡಿ ಕಾರ್ಯಕರ್ತೆ ಪ್ರಿಯಾಂಕ, ಆಶಾ ಕಾರ್ಯಕರ್ತೆ ಎನ್. ರೇಣುಕಾ  ಹಾಗೂ ಗ್ರಾಮಸ್ಥರು ಇದ್ದರು.

error: Content is protected !!