ದಾವಣಗೆರೆ, ಮಾ. 10- ನಿತ್ಯ ಅಭ್ಯಾಸ ಮಾಡಬೇಕು, ಅಂದಿನ ಪಾಠವನ್ನು ಅಂದೇ ಓದಬೇಕು ಎಂದು ವಾಗ್ಮಿಗಳು ಹಾಗೂ ಕಾರ್ಕಳದ ಉಪನ್ಯಾಸಕ ಆದರ್ಶ ಗೋಖಲೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
`ಪರೀಕ್ಷಾ ಸಿಧ್ಧತೆ ಹಾಗು ಯಶಸ್ಸು’ ಕುರಿತು ಗೋಣಿವಾಡ ಬಳಿಯ ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯ ಹಾಗೂ ಎಲೈಟ್ ಒಲಂಪಿಯಾಡ್ ಸ್ಕೂಲ್ ನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಪರೀಕ್ಷೆ ಜೀವನದ ಒಂದು ಭಾಗವೇ ಹೊರತು, ಪರೀಕ್ಷೆಯೇ ಜೀವನವಲ್ಲ, ಪರೀಕ್ಷೆಯನ್ನು ಎದುರಿಸಲು ಬೇಕಾಗಿರುವುದು ಶ್ರದ್ಧೆ, ಪ್ರಯತ್ನ, ಪ್ರಾಮಾಣಿಕತೆ, ಶಿಸ್ತು ಮತ್ತು ನಂಬಿಕೆ ಎಂದು ತಿಳಿಸಿದರು.
ಈ ವೇಳೆ ಶಾಲೆಯ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ್, ಎಲೈಟ್ ಒಲಂಪಿಯಾಡ್ ಸ್ಕೂಲ್ ಪ್ರಾಂಶುಪಾಲ ವೇಣು, ಸೋಮೇಶ್ವರ ವಿದ್ಯಾಲಯದ ಪ್ರಾಂಶುಪಾಲರಾದ ವೀಣಾ ಮತ್ತಿತರರು ಉಪಸ್ಥಿತರಿದ್ದರು.