ಶಿಲ್ಪ ಕಲಾವಿದ ಟಿ.ಶಿವಶಂಕರ್‌ಗೆ ಸನ್ಮಾನ

ಶಿಲ್ಪ ಕಲಾವಿದ ಟಿ.ಶಿವಶಂಕರ್‌ಗೆ ಸನ್ಮಾನ

ದಾವಣಗೆರೆ, ಮಾ.10-  ಶಿಕಾರಿಪುರದ ಶಿಲ್ಪ ಕಲಾವಿದರು ಹಾಗೂ ವಿವಿಧ ಸಂಘಟನೆಗಳ  ಮುಖಂಡರಿಂದ ಈಚೆಗೆ ನಗರದ ಶಿಲ್ಪ ಕಲಾವಿದರೂ ಆದ  ಕರ್ನಾಟಕ  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಟಿ. ಶಿವಶಂಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಮ್ಮ  ಪರಂಪರೆ ಹಾಗೂ ಶಿಲ್ಪ ಕಲೆ ಉಳಿವಿಗಾಗಿ ಶ್ರಮಿಸು ತ್ತಿರುವ ಶಿವಶಂಕರ್ ಅವರಂಥವರನ್ನು  ಸರ್ಕಾರ ಗುರುತಿಸಿರುವುದು ಹೆಮ್ಮೆಯ ವಿಷಯ.ಕಲಾವಿದರುಗಳ ನೆರವಿಗೆ ಸರ್ಕಾರ ಮುಂದಾಗಬೇಕು.  ಅಕಾಡೆಮಿಗಳಿಂದ   ಕಲಾವಿದರಿಗೆ ಆರ್ಥಿಕ ನೆರವು ನೀಡಿದಾಗ, ಕಲೆಗೆ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದು ಈ ಸಂದರ್ಭದಲ್ಲಿ ಮುಖಂಡರು ಅಭಿಪ್ರಾಯಿಸಿದರು.

error: Content is protected !!