ಹಳೇಪೇಟೆ ವೀರಭದ್ರೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ಭೂಮಿ ಪೂಜೆ

ಹಳೇಪೇಟೆ ವೀರಭದ್ರೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ಭೂಮಿ ಪೂಜೆ

ದಾವಣಗೆರೆ, ಮಾ. 8 – ನಗರದ ಹಳೇಪೇಟೆ ಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಶ್ರೀ ಕುದುರೆ ಮಹಾಲಿಂಗಪ್ಪ ಕಲ್ಯಾಣ ಮಂಟಪವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸಮುದಾಯ ಭವನ ಪುನರ್‌ ನಿರ್ಮಾಣಕ್ಕೆ ಭೂಮಿ ಪೂಜಾ ಸಮಾರಂಭವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಿನ್ನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ, ಆರ್.ವಿ. ಬಕ್ಕಪ್ಪ, ಹರಿಹರದ ಕರಿಬಸಪ್ಪ, ಎಂ.ಕೆ. ಬಕ್ಕಪ್ಪ, ಕಿರುವಾಡಿ ಸೋಮಣ್ಣ, ಕುದುರಿ ಕರಿಬಸಪ್ಪ, ಎನ್.ಕೆ. ಕೊಟ್ರೇಶ್, ಮೆರವಣಿಗೆ ಜಯವಿಭವ, ಹೋಲೂರು ಶಂಭಣ್ಣ, ಹೋಲೂರು ಚಂದ್ರಕೀರ್ತಿ, ಕೆ.ಎನ್. ಮೃತ್ಯುಂಜಯ, ಕೋಡಬಾಳು ಚನ್ನಬಸಪ್ಪ, ಚಿಂದೋಡಿ ಚಂದ್ರಧರ, ಕುಂದರಿ ವಿಶ್ವನಾಥ್, ಶಾಮನೂರು ವಿಜಯ್, ಮಲ್ಲಾಬಾದಿ ಮಹಾದೇವ್ ಮೂರ್ತಿ, ಮೆರವಣಿಗೆ ನಿರಂಜನ, ಭಕ್ತಾದಿಗಳಾದ ಸುರೇಶ ಬಿ. ಅರವಿ, ಮಲ್ಲಾಬಾದಿ ಗುರುಬಸವರಾಜ್, ಕುದುರಿ ಉಮೇಶ್, ಟಿ. ವೀರೇಶ್, ವೀರೇಶ್ ಅರವಿ, ಕುದುರಿ ಮುರುಗೇಂದ್ರಪ್ಪ, ಕೆ.ಬಿ. ಪ್ರಭು ಹಾಗೂ ಭಕ್ತಾದಿಗಳು  ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

error: Content is protected !!