ಹರಿಹರದಲ್ಲಿ ಹಜರತ್ ಸೈಯದ್ ನಾಡಬಂದ್ ಷಾವಲಿ ಖಾದರಿ ಸಂದಲ್ ಓ ಉರುಸ್ ಮೆರವಣಿಗೆ

ಹರಿಹರದಲ್ಲಿ ಹಜರತ್ ಸೈಯದ್ ನಾಡಬಂದ್ ಷಾವಲಿ ಖಾದರಿ ಸಂದಲ್ ಓ ಉರುಸ್ ಮೆರವಣಿಗೆ

ಹರಿಹರ, ಮಾ. 6- ನಗರದ ತುಂಗಭದ್ರಾ ನದಿಯ ಹತ್ತಿರದ ದರ್ಗಾ ಸಮಿತಿ  ವತಿಯಿಂದ ಹಜರತ್ ಸೈಯದ್ ನಾಡಬಂದ್ ಷಾವಲಿ ಖಾದರಿ ಸಂದಲ್ ಓ ಉರುಸ್ ಮೆರವಣಿಗೆ  ಕಾರ್ಯಕ್ರಮ ಇಂದು ಅದ್ದೂರಿಯಾಗಿ ಜರುಗಿತು. 

ದರ್ಗಾದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಬ್ಯಾಂಡ್ ಸೆಟ್, ಕುದುರೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡದವರು ಭಾಗವಹಿಸಿದ್ದರು.  ಆಸಿಫ್ ಉಲ್ಲಾ, ಖಾನ್ ಸದರ್,  ಪೇಂಟರ್ ಗೌಸ್‌ ಸಾಬ್, ಹಜರತ್ ಪ್ಯಾರಿಜಾನ್ ಸಾಬ್, ಖಲಿಫಾಯೇ ಸತ್ತಾರ್ ಸಾಬ್, ಮಕಾನ್ ದಾರ್ ಮಶಾಹಿಕ್ ಫಕೀರರ ಸಮ್ಮುಖದಲ್ಲಿ ಗಲೇಫ್ ಮತ್ತು ಸಂದಲ್  ಮೆರವಣಿಗೆ   ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ದರ್ಗಾಕ್ಕೆ ಆಗಮಿಸಿತು. 

 ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಬಿ.ಕೆ. ಸೈಯದ್ ರೆಹಮಾನ್, ಸೈಯದ್ ಜಬಿವುಲ್ಲಾ, ಬಿ.ಕೆ. ಸೈಯದ್ ಬಾಷಾ, ಅಲಿ ಆಹ್ಮದ್, ಹಾಜಿಹಾಲಿ ಖಾನ್, ಆಮ್ಮದ್ ಖಾನ್, ಮೊಹಮ್ಮದ್ ಇಬ್ರಾಹಿಂ ಸಾಬ್, ಶಬ್ಬೀರ್ ಆಹ್ಮದ್ ಖುರೇಶಿ, ಅಲ್ಲಾಬಕ್ಷ್ , ಗೌಸ್ ಖಾನ್,  ಅಬ್ದುಲ್ ಸತ್ತಾರ್ ಸಾಬ್, ಸೈಯದ್ ಮೆಹಬೂಬ್ ಸಾಬ್ ಮತ್ತು ಉರುಸ್ ಕಮಿಟಿಯ ಆಸೀಫ್ ಆಲಿ ಖಾನ್, ಮುಸ್ತಾಫ್, ಅಬ್ದುಲ್ ಘನಿ, ರೆಹಮಾನ್ ಪೇಂಟರ್, ಇರ್ಫಾನ್ ದರ್ವೇಶ್ ಇತರರು ಹಾಜರಿದ್ದರು.

 ಉರುಸ್ ಅಂಗವಾಗಿ ನಾಳೆ  ದಿನಾಂಕ 7ರ ಗುರುವಾರ ರಾತ್ರಿ 10 ಗಂಟೆಗೆ  ಮುಂಬೈನ  ಆಸೀಫ್ ನಾಜಾ ಮತ್ತು ಪಾರ್ಟಿ,  ಉತ್ತರ ಪ್ರದೇಶದ  ಬಿಜನೂರ್   ಸರ್ಫ್ರಾಜ್, ಸಾಬಿರಿ ಕ್ಯೂವಲ್ ಸೇರಿದಂತೆ ಇತರೆ ಪ್ರಸಿದ್ಧ ಖವ್ವಾಲರುಗಳಿಂದ ಜಿದ್ದಾ-ಜಿದ್ದಿ ಖವ್ವಾಲಿ ಕಾರ್ಯಕ್ರಮ ನಡೆಯಲಿದೆ. 

error: Content is protected !!