ದಾವಣಗೆರೆ, ಫೆ. 29- ದಾವಣಗೆರೆ ವಕೀಲರ ಸಹಕಾರ ಸಂಘವು ಕಕ್ಷಿಗಾರರು ಮತ್ತು ವಕೀಲರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಜಿಲ್ಲಾ ವಕೀಲರ ಸಂಘದ ಸಭಾ ಭವನದಲ್ಲಿ ಆರಂಭಿಸಿರುವ ವಿವಿಧ ಸ್ಟೇಷನರಿ ಸಾಮಗ್ರಿ ಹಾಗೂ ಈ ಸ್ಟ್ಯಾಂಪ್ ಮಾರಾಟ ಕೌಂಟರ್ ಅನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ಶ್ರೀಮತಿ ರಾಜೇಶ್ವರಿ ಹೆಗಡೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಹಕಾರ ಸಂಘದ ಅಧ್ಯಕ್ಷ ಹೆಚ್.ದಿವಾಕರ್, ಉಪಾಧ್ಯಕ್ಷ ಗವಿಯಪ್ಪ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್, ಕಾರ್ಯದರ್ಶಿ ಎಸ್.ಬಸವರಾಜ್, ಸಹಕಾರ ಸಂಘದ ನಿರ್ದೇಶಕರಾದ ಎ.ಸಿ. ರಾಘವೇಂದ್ರ, ಡಿ.ಪಿ.ಬಸವರಾಜ್, ಸಿ.ಜಿ. ರಾಜಶೇಖರ್, ಎ.ಕೆ. ಹಾಲಪ್ಪ, ಲೋಕಿಕೆರೆ ಪ್ರದೀಪ್, ಡಿ.ಎನ್. ಬಸವರಾಜ್, ಜಿ.ಕೆ. ಬಸವರಾಜ್, ತಿರುಕಪ್ಪ, ಕೆ.ಕೆ. ರಂಗಸ್ವಾಮಿ, ಸದಾಶಿವ, ಎಂ.ಆರ್. ಚಂದ್ರಪ್ಪ ಸಿ.ಪಿ. ಅನಿತಾ, ಎಸ್. ಸವಿತಾ, ಕಾರ್ಯದರ್ಶಿ ನಾಗಯ್ಯ, ಶ್ರೀಕಾಂತ್ ಹುದ್ದಾರ್ ಮತ್ತು ಇತರೆ ವಕೀಲರುಗಳು ಹಾಜರಿದ್ದರು.