ಶಿವನಹಳ್ಳಿ ರಮೇಶ್, ಶ್ರೀನಿವಾಸ್ ಶಿವಗಂಗಾಗೆ ಹೃದಯಸ್ಪರ್ಶಿ ಸನ್ಮಾನ

ಶಿವನಹಳ್ಳಿ ರಮೇಶ್, ಶ್ರೀನಿವಾಸ್ ಶಿವಗಂಗಾಗೆ ಹೃದಯಸ್ಪರ್ಶಿ ಸನ್ಮಾನ

ದಾವಣಗೆರೆ, ಫೆ.27- ಸಿರಿಗೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ನಗರದ ಮಾಗನೂರು ಬಸಪ್ಪ ಮೈದಾನದಲ್ಲಿ ಕಳೆದ ವಾರ ಏರ್ಪಡಾಗಿದ್ದ ದಾವಣಗೆರೆ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾ ಸ್ಪರ್ಧೆಯಲ್ಲಿ ಸಮಾಜಮುಖಿ ಕಾರ್ಯಗಳಿಗೆ ಸದಾ ಸ್ಪಂದಿಸುತ್ತಿರುವ ಸಮಾಜದ ಮುಖಂಡರುಗಳಾದ ಶಿವನಹಳ್ಳಿ ರಮೇಶ್ ಮತ್ತು ಶ್ರೀನಿವಾಸ್ ಶಿವಗಂಗಾ ಅವರನ್ನು ಸನ್ಮಾನಿಸಲಾಯಿತು.

ಕ್ರೀಡಾ ಸ್ಪರ್ಧೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹೆಚ್ ಡಿ ಮಹೇಶ್ವರಪ್ಪ, ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಗೌರವ ಕಾರ್ಯದರ್ಶಿ ಎಂ.ಬಿ ಸಂಗಮೇಶ್ವರ ಗೌಡ, ಜವಳಿ ಉದ್ಯಮಿ ಬಿ.ಸಿ ಉಮಾಪತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ, ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಗೀತಾ ದಿಳ್ಯಪ್ಪ, ಶಿವಸೈನ್ಯದ ಗೌರವಾಧ್ಯಕ್ಷ ಶಶಿಧರ ಹೆಮ್ಮನಬೇತೂರು, ಅಧ್ಯಕ್ಷ ಲಿಂಗರಾಜ್ ಅಗಸನಕಟ್ಟೆ, ಉಮೇಶ್ ಮಾಗನೂರು, ಕುಮಾರ್  ಮೆಳ್ಳೇಕಟ್ಟೆ, ಶಿವಕುಮಾರ್ ಕೊರಟಿಕೆರೆ, ರವಿಕುಮಾರ್, ಅಶೋಕ್ ಹೊನ್ನನಾಯಕನ ಹಳ್ಳಿ,  ಸತೀಶ್ ಸಿರಿಗೆರೆ, ರವಿ ನುಗ್ಗಿಹಳ್ಳಿ, ವಿನ್ನರ್ ಅಕಾಡೆಮಿಯ ಸಂಸ್ಥಾಪಕ ಶಿವರಾಜ್ ಕಬ್ಬೂರು ಇನ್ನೂ ಮುಂತಾದವರು  ಉಪಸ್ಥಿತರಿದ್ದರು.

error: Content is protected !!