ಕಾಂಗ್ರೆಸ್ ಅಧಿಕಾರ ಇರುವವರೆಗೂ `ಗ್ಯಾರಂಟಿ’ಗಳು ಇರುತ್ತವೆ

ಕಾಂಗ್ರೆಸ್ ಅಧಿಕಾರ ಇರುವವರೆಗೂ `ಗ್ಯಾರಂಟಿ’ಗಳು ಇರುತ್ತವೆ

ರಾಣೇಬೆನ್ನೂರು ಗ್ಯಾರಂಟಿ ಸಮಾವೇಶದಲ್ಲಿ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ

ರಾಣೇಬೆನ್ನೂರು, ಫೆ.25-  ಬರಲಿರುವ ಲೋಕಸಭೆ ಚುನಾವಣೆ ನಂತರ ನಮ್ಮ ಗ್ಯಾರಂಟಿಗಳು ನಿಲ್ಲುತ್ತವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅವು ನಿಲ್ಲುವುದಿಲ್ಲ. ನಮ್ಮ ಅಧಿಕಾರ ಇರುವವರೆಗೂ `ಗ್ಯಾರಂಟಿಗಳು’ ಇರುತ್ತವೆ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬ್ಯಾಡಗಿ ಕ್ಷೇತ್ರದ ಶಾಸಕ  ಬಸವರಾಜ ಶಿವಣ್ಣನವರ ಹೇಳಿದರು.

ರಾಣೇಬೆನ್ನೂರಿನಲ್ಲಿ ಇಂದು ಜರುಗಿದ  ಹೋಬಳಿ ಮಟ್ಟದ ಐದು ಗ್ಯಾರಂಟಿ ಯೋಜನೆಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಡಿನ ಹೆಣ್ಣು ಮಕ್ಕಳ ಆರ್ಥಿಕ ಸಬಲತೆ ಗಮನದಲ್ಲಿಟ್ಟುಕೊಂಡು ನಮ್ಮ ಮುಖಂಡರು ಚುನಾವಣೆ ಪೂರ್ವದಲ್ಲಿ ಗ್ಯಾರಂಟಿ ಯೋಜನೆ ಗಳ ಮಾತು ಕೊಟ್ಟಿದ್ದರು. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದಿದೆ. ನಮ್ಮ ನಡೆ ಬಗ್ಗೆ ಗ್ಯಾರಂಟಿಗಳ ಫಲಾನುಭವಿಗಳಾದ ತಮಗೆಲ್ಲ ರಿಗೂ ಗೊತ್ತಿದೆ. ಆಧಾರ್ ಮುಂತಾದ ತಾಂತ್ರಿಕ  ದೋಷದಿಂದ ಶೇಕಡಾ ಒಂದೆರಡರಷ್ಟು ಫಲಾನಭವಿಗಳಿಗೆ ಆಗಿರುವ ತೊಂದರೆಯನ್ನು ಸರಿಪಡಿಸುತ್ತೇವೆ. ವಿರೋಧಿಗಳ ಮಾತಿಗೆ ಕಿವಿಕೊಡದೆ ಬರಲಿರುವ ಲೋಕಸಭೆ ಚುನಾವಣೆಯಲ್ಲಿ ನಮಗೆ ಆಶೀರ್ವದಿಸಿ ಎಂದು ಶಿವಣ್ಣನವರು ಮನವಿ ಮಾಡಿದರು.

ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಆಶೀರ್ವದಿಸಿರಿ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಕಾಶ ಕೋಳಿವಾಡ ಮನವಿ ಮಾಡಿದರು.

ತಹಶೀಲ್ದಾರ್‌ ಗುರುಬಸವರಾಜ,  ಶಿಕ್ಷಣಾಧಿ ಕಾರಿ ಎಂ. ಎಚ್. ಪಾಟೀಲ,  ಸಿಡಿಪಿಒ ಪಾರ್ವತಿ ಹುಂಡೇಕಾರ, ಈ.ಒ. ಸುಮಲತಾ, ಸಾರಿಗೆ ಸಂಸ್ಥೆಯ ಪ್ರಶಾಂತ ಸಂಗರ್ಸಿ, ಸಮಾಜ ಕಲ್ಯಾಣ ಅಧಿಕಾರಿ ಶಿವಪ್ಪ ವನಳ್ಳಿ, ಹೆಸ್ಕಾಂನ ಮೋಹನ ಐರಣಿ, ನಗರಸಭೆ ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ ಮತ್ತು ಇತರರು ಪಾಲ್ಗೊಂಡಿದ್ದರು.

error: Content is protected !!