ಮಲೇಬೆನ್ನೂರಿನಲ್ಲಿ ಇಂದು – ನಾಳೆ `ಗಂಧ-ಉರುಸು’ ಹಬ್ಬ

ಮಲೇಬೆನ್ನೂರಿನಲ್ಲಿ ಇಂದು  – ನಾಳೆ `ಗಂಧ-ಉರುಸು’ ಹಬ್ಬ

ಮಲೇಬೆನ್ನೂರು,ಫೆ.20- ಪಟ್ಟಣದಲ್ಲಿ ನಾಳೆ ದಿನಾಂಕ 21 ಮತ್ತು 22ರಂದು ಜರುಗಲಿರುವ ಹಜರತ್ ಸೈಯ್ಯದ್ ಹಬೀಬುಲ್ಲಾ ಷಾ ಖಾದ್ರಿ ಅವರ ಗಂಧ ಹಾಗೂ ಉರುಸು ಅಂಗವಾಗಿ ಶುಕ್ರವಾರ ಸಂಜೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಆರಂಭದಲ್ಲಿ ಮಾತನಾಡಿದ ಮಲೇಬೆನ್ನೂರು ಪಿಎಸ್‌ಐ ಪ್ರಭು ಕೆಳಗಿನಮನೆ, ಉರುಸುಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಿರುವುದರಿಂದ ಅಗತ್ಯ ಕ್ರಮ ಗಳನ್ನು ತೆಗೆದುಕೊಳ್ಳಲು ಉರುಸು ಕಮಿಟಿಯವರು ಸಹಕರಿಸಬೇಕು ಎಂದು ಕೇಳಿಕೊಂಡರು.

ಈ ವೇಳೆ ಮಾತನಾಡಿದ ಉರುಸು ಕಮಿಟಿ ಅಧ್ಯಕ್ಷ ಎಂ.ಬಿ.ಕುರ್ಬಾನ್ ಅಲಿ,  ನಾಳೆ ದಿನಾಂಕ 21ರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10ರವರೆಗೆ ಪಟ್ಟಣದಲ್ಲಿ ಗಂಧದ ಮೆರವಣಿಗೆ ನಡೆಯಲಿದ್ದು, 22ರಂದು ರಾತ್ರಿ 10 ಗಂಟೆಗೆ ಪ್ರಸಿದ್ಧ ಖವ್ವಾಲರಿಂದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಪುರಸಭೆ ಸದಸ್ಯರಾದ ಖಲೀಲ್, ನಯಾಜ್, ಮುಖಂಡರಾದ ಶೇರ್ ಅಲಿ, ಖುದ್ದೂಸ್, ಸೈಯದ್ ಜಾಕೀರ್, ಪುರಸಭೆ ಸದಸ್ಯ ಕೆ.ಜಿ.ಲೋಕೇಶ್, ಕೆ.ಪಿ. ಗಂಗಾಧರ್, ಪಿ.ಆರ್.ರಾಜು, ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್, ಸಿಪಿಐ ಸುರೇಶ್ ಸಗರಿ ಮಾತನಾಡಿದರು.

ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ್ ಸಿದ್ದನಗೌಡರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಬಿ.ರಫೀವುಲ್ಲಾ, ಶಕ್ತಿ ಸಾಮಿಲ್ ಮುನ್ನಾ, ಎಂ.ಬಿ.ರುಸ್ತುಂ, ಇರ್ಫಾನ್ ಖಾನ್, ಹಬೀಬುಲ್ಲಾ, ಶಾಬುದ್ದೀನ್ ಸೇರಿದಂತೆ ಇನ್ನೂ ಅನೇಕರು ಸಭೆಯಲ್ಲಿದ್ದರು. ಎಎಸ್‌ಐ ಶ್ರೀನಿವಾಸ ಸ್ವಾಗತಿಸಿದರು.

error: Content is protected !!